ಗೋಕಾಕ:ನಮ್ಮದು ಕ್ವಿಟ್ ಇಂಡಿಯಾ ಮಾದರಿಯ ಕ್ವಿಟ್ ಗೋಕಾಕ ಹೋರಾಟ : ಲಖನ ಜಾರಕಿಹೊಳಿ ವ್ಯಂಗ್ಯ
ನಮ್ಮದು ಕ್ವಿಟ್ ಇಂಡಿಯಾ ಮಾದರಿಯ ಕ್ವಿಟ್ ಗೋಕಾಕ ಹೋರಾಟ : ಲಖನ ಜಾರಕಿಹೊಳಿ ವ್ಯಂಗ್ಯ
ನಮ್ಮ ಬೆಳಗಾವಿ ಇ -ವಾರ್ತೆ , ಗೋಕಾಕ ಸೆ 25 :
ಕ್ವಿಟ್ ಇಂಡಿಯಾ ಚಳುವಳಿ ಮಾದರಿಯಲ್ಲಿ ಕ್ವಿಟ್ ಗೋಕಾಕ ಹೋರಾಟ ಮಾಡಿ ಅಂಬಿರಾವ್ ಪಾಟೀಲ ಮತ್ತು ಕೆಲ ನಗರಸಭೆ ಸದಸ್ಯರ ಭ್ರಷ್ಟಾಚಾರ ಸಾಮ್ರಾಜ್ಯವನ್ನು ಅಂತ್ಯ ಗೋಳಿಸಲಾಗುವದು ಎಂದು ಕಾಂಗ್ರೆಸ್ ದುರೀಣ ಲಖನ್ ಜಾರಕಿಹೊಳಿ ಗುಡುಗಿದ್ದಾರೆ
ಬುಧವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು
ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತದ್ದೇನೆ ಆದರೆ ಸಹೋದರ ರಮೇಶ ಜಾರಕಿಹೊಳಿ ಅವರ ಅಳಿಯ ಅಂಬಿರಾವ್ ಪಾಟೀಲ ಹಿರಿಯ ನಗರಸಭೆ ಸದಸ್ಯರೊಂದಿಗೆ ಸೇರಿ ಗೋಕಾಕಿನಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ನಗರದಲ್ಲಿ ಯಾವುದೇ ಸಾರ್ವಜನಿಕರ ಕೆಲಸ ಆಗಬೇಕಾದರೆ ಅಂಬಿರಾವ್ ಪಾಟೀಲ ಅಪ್ಪಣೆ ಪಡೆದೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಇದನ್ನು ತಡೆ ಹಿಡಿಯುವದೇ ನಮ್ಮ ಮೂಲ ಉದ್ದೇಶವಾಗಿದ್ದು ನಮ್ಮ ಹೋರಾಟ ಸಹೋದರ ರಮೇಶ ಜಾರಕಿಹೊಳಿ ಅವರ ವಿರುದ್ದ ಅಲ್ಲ ಅಂಬಿರಾವ್ ಪಾಟೀಲ ಮತ್ತು ಟೀಂ ವಿರುದ್ದ ಎಂದು ಲಖನ್ ಜಾರಕಿಹೊಳಿ ಅವರು ಅಂಬಿರಾವ್ ಪಾಟೀಲ ವಿರುದ್ದ ಕಿಡಿಕಾರಿದ್ದಾರಲ್ಲದೆ ಇದೊಂದು ಕ್ವಿಟ್ ಗೋಕಾಕ ರೂಪದ ಹೋರಾಟ ಎಂದು ವಾಗ್ದಾಳಿ ನಡೆಸಿದ್ದಾರೆ
ಸೋಮವಾರ ಉಮೇದುವಾರಿಕೆ ಸಲ್ಲಿಕೆ : ಉಪ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದು ಅಧಿಕೃತವಾಗಿ ಸೋಮವಾರ ಕೊನೆಯ ದಿನ ಕಾಂಗ್ರೆಸ್ ಪಕ್ಷದ ಹುರಿಯಾಳುಯಾಗಿ ಉಮೇದುವಾರಿಕೆ ಸಲ್ಲಿಸಲಾಗುವದು ಎಂದು ಲಖನ್ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು