RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಪಾಲ್ಸ , ಮರಡಿಮಠ , ಗ್ರಾಮಗಳಿಗೆ ಮಾಜಿ ಸಚಿವ ಸತೀಶ ಭೇಟಿ

ಗೋಕಾಕ:ಪಾಲ್ಸ , ಮರಡಿಮಠ , ಗ್ರಾಮಗಳಿಗೆ ಮಾಜಿ ಸಚಿವ ಸತೀಶ ಭೇಟಿ 

ಪಾಲ್ಸ , ಮರಡಿಮಠ , ಗ್ರಾಮಗಳಿಗೆ ಮಾಜಿ ಸಚಿವ ಸತೀಶ ಭೇಟಿ

 

ನಮ್ಮ ಬೆಳಗಾವಿ ಇ -ವಾರ್ತೆ ಗೋಕಾಕ ಅ 8 :

 

ಉಪ ಚುನಾವಣೆಗೆ ಇನ್ನೂ ಎರೆಡು ತಿಂಗಳು ಬಾಕಿ ಇರುವಾಗಲೇ ಗೋಕಾಕ ಮತಕ್ಷೇತ್ರದಲ್ಲಿ ಸಹೋದರರ ವಾರ ಜೋರಾಗಿ ನಡೆದಿದೆ ಮೊನ್ನೆಯಷ್ಟೇ ತಾಲೂಕಿನ ಶಿಂಧಿಕುರಬೇಟೆ ಗ್ರಾಮದಲ್ಲಿ ಪ್ರಚಾರ ನಡೆಸಿ ಸಹೋದರ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ವಿರುದ್ಧ ವಾಕ್ ಸಮರ ನಡೆಸಿದ್ದ ಸತೀಶ ಮತ್ತು ಲಖನ್ ಜಾರಕಿಹೊಳಿ ಅವರು ಭ್ರಷ್ಟಾಚಾರ ಮುಕ್ತ ಕ್ಷೇತ್ರ ಮಾಡುವುದೆ ನಮ್ಮ ಗುರಿ ಎಂದು ವಾಗ್ದಾಳಿ ನಡೆಸಿದರು

ಮಂಗಳವಾರವವು ಕ್ಷೇತ್ರ ಸಂಚಾರ ಮುಂದುವರಿಸಿರುವ ಶಾಸಕ ಸತೀಶ ಜಾರಕಿಹೊಳಿ ಅವರು ತಾಲೂಕಿನ ಫಾಲ್ಸ ಕೊಣ್ಣೂರು ಗ್ರಾಮಗಳಿಗೆ ಭೇಟಿ ನೀಡಿ ಮತದಾರರ ಸಮಸ್ಯೆಗಳನ್ನು ಆಲಿಸಿದರು ನಂತರ ಮಾತನಾಡಿದ ಅವರು ಕಳೆದ ಎರೆಡು ದಶಕಗಳಿಂದ ಕ್ಷೇತ್ರದಲ್ಲಿ ನಡೆದಿರುವ ದಬ್ಬಾಳಿಕೆಯನ್ನು ಹಿತ್ತೋಗೆದು ಸಾರ್ವಜನಿಕರಿಗೆ ಭಯಮುಕ್ತ ವಾತಾವರಣ ನಿರ್ಮಿಸುವದೆ ನಮ್ಮ ಪ್ರಥಮ ಆದ್ಯತೆಯಾಗಿದ್ದು, ನಿಮ್ಮ ಸಮಸ್ಯೆಗಳಿಗೆ ಸ್ವಂದಿಸಲು ನಮ್ಮ ಬೆಂಬಲಿಗರು ಸಿದ್ದವಿದ್ದಾರೆ ಯಾರು ಭಯಪಡದೆ ನಮ್ಮನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು
ನಂತರ ಕಾಡಸಿದ್ದೇಶ್ವರ ಮಠಕ್ಕೆ ತೆರಳಿದ ಅವರು ಅದೃಷ್ಯ ಕಾಡಸಿದ್ದೇಶ್ವರ ದೇವರ ಆರ್ಶಿವಾದ ಪಡೆದರು

ಈ ಸಂದರ್ಭದಲ್ಲಿ ಪಾಂಡು ಮನ್ನಿಕೇರಿ, ರಮೇಶ ಪೂಜಾರಿ , ಪರಸರಾಮ ಗುಡ್ಡಾಕಾಯು, ಮಹಾಂತೇಶ ಪಾತ್ರೋಟ, ಆನಂದ ಹವಳಪ್ಪಗೋಳ, ಮಂಜುನಾಥ್ ಹುಕ್ಕೇರಿ, ಕಳ್ಳೋಳಿ ಗಾಡಿವಡ್ಡರ, ಶ್ರೀಧರ ಪೂಜೇರಿ, ಕುಮಾರ ಲಂಕೇನ್ನವರ, ರಾಯಪ್ಪ ಹಂದ್ಯಾಗೋಳ, ರಾಮ ಗುಡ್ಡಾಕಾಯು , ಪೀರೋಜ ಫರಾಸ ಸೇರಿದಂತೆ ಇತರರು ಇದ್ದರು

Related posts: