ಗೋಕಾಕ:ಟೆಂಪಲ್ ರನ್ ಮೂಲಕ ಮತಭೇಟೆ ಪ್ರಾರಂಭಿಸಿದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿಗೆ ಭಾರಿ ಬೆಂಬಲ
ಟೆಂಪಲ್ ರನ್ ಮೂಲಕ ಮತಭೇಟೆ ಪ್ರಾರಂಭಿಸಿದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿಗೆ ಭಾರಿ ಬೆಂಬಲ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 20 :
ಮೈತ್ರಿ ಸರಕಾರದ ಬುಡವನ್ನೇ ಅಲ್ಲಾಡಿಸಿ ಬಿಜೆಪಿ ಪಕ್ಷವನ್ನು ಸೇರಿ ಗೋಕಾಕ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ವರ್ಧೆಗೆ ಇಳಿದಿರುವ ರಮೇಶ ಜಾರಕಿಹೊಳಿ ಅವರು ನಗರದ ಲಕ್ಷ್ಮೀ ದೇವಿಯ ಆರ್ಶಿವಾದ ಪಡೆದು ಪ್ರಚಾರ ಪ್ರಾರಂಭಿಸಿದರು
ಬುಧವಾರದಂದು ಬೆಳ್ಳಿಗೆ ನಿಗದಿತ ಸಮಯಕ್ಕಿಂತ ಅರ್ಥ ಘಂಟೆ ಮೂಂಚೆಯೇ ಬಂದು ಗ್ರಾಮ ದೇವತೆ ಲಕ್ಷ್ಮೀ ದೇವಿಯ ಆರ್ಶಿವಾದ ಪಡೆದ ರಮೇಶ ಜಾರಕಿಹೊಳಿ ಅವರು ಮತಕ್ಷೇತ್ರದ ಬೆನಚಿನ್ನಮರಡಿ , ಮಾಲದಿನ್ನಿ, ಉಪಾರಟ್ಟಿ , ಮಮದಾಪೂರ ,ಮರಡಿಶಿವಾಪೂರ , ಅಜ್ಜನಕಟ್ಪಿ ,ಹಣಮಾಪೂರ ,ಹೂಲಿಕಟ್ಟಿ ಗ್ರಾಮಗಳಿಗೆ ತೆರಳಿ ಗ್ರಾಮಗಳ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಜನಪ್ರತಿನಿಧಿಗಳು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಅನೇಕರು ಬಿಜೆಪಿಯ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಗೆ ಸಾಥ್ ನೀಡಿದರು . ಬಿಜೆಪಿ ಸೇರಿ ಪ್ರಥಮ ಬಾರಿಗೆ ಮತಯಾಚನೆ ಮಾಡಲು ಗ್ರಾಮಗಳಿಗೆ ತೆರಳಿದ್ದ ರಮೇಶ ಜಾರಕಿಹೊಳಿ ಅವರಿಗೆ ಎಲ್ಲ ಗ್ರಾಮಗಳಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತ ಪಡಿಸಿದರು