RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಶಿಕ್ಷಕರು ಹಾಗೂ ಪಾಲಕರು ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು : ಬಿಇಒ ಬಳಗಾರ

ಗೋಕಾಕ:ಶಿಕ್ಷಕರು ಹಾಗೂ ಪಾಲಕರು ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು : ಬಿಇಒ ಬಳಗಾರ 

ಶಿಕ್ಷಕರು ಹಾಗೂ ಪಾಲಕರು ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು : ಬಿಇಒ ಬಳಗಾರ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 25 :

 

 

ಶಿಕ್ಷಕರು ಹಾಗೂ ಪಾಲಕರು ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯ ನಿರ್ವಹಿಸಿ ಮಕ್ಕಳನ್ನು ಪ್ರತಿಭಾನ್ವಿತರನ್ನಾಗಿ ಮಾಡುವಂತೆ ಬಿಇಓ ಜಿ.ಬಿ.ಬಳಗಾರ ಕರೆ ನೀಡಿದರು.
ಅವರು ನಗರದ ನೇತಾಜಿ ಎಜ್ಯುಕೇಶನಲ್ ಮತ್ತು ಸೋಶಿಯಲ್ ವೆಲ್‍ಫೇರ್ ಸೊಸೈಟಿಯ ಭಾರತೀಯ ವಿದ್ಯಾ ಮಂದಿರ ಕನ್ನಡ ಮಾಧ್ಯಮ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ 15ನೇ ಹಾಗೂ ನೇತಾಜಿ ಆಂಗ್ಲ ಮಾಧ್ಯಮ ಶಾಲೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದಾಗಿದೆ, ಅವರಿಗೆ ಶಿಕ್ಷಣದೊಂದಿಗೆ ಉತ್ತಮ ಆಚಾರ-ವಿಚಾರ, ಸಂಸ್ಕಾರಗಳನ್ನು ನೀಡಿ ಒಳ್ಳೆಯ ನಾಗರಿಕರನ್ನಾಗಿ ಮಾಡುವಂತೆ ಸಲಹೆ ನೀಡಿದ ಅವರು ಎಲ್ಲ ಮಕ್ಕಳಲ್ಲೂ ಪ್ರತಿಭೆಗಳು ಇದ್ದು ಅವರಲ್ಲಿರುವ ಸುಪ್ತಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಅವರನ್ನು ಸಾಧಕರನ್ನಾಗಿ ಮಾಡುವ ಜವಾಬ್ದಾರಿ ಪಾಲಕರು ಹಾಗೂ ಶಿಕ್ಷಕರ ಮೇಲಿದೆ. ಸಂಸ್ಥೆಗೆ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಮಹಾತ್ಮರ ಹೆಸರು ಮತ್ತು ಭಾವಚಿತ್ರಗಳನ್ನು ಶಾಲೆಗಳಲ್ಲಿ ಹಾಕುವ ಮೂಲಕ ಮಕ್ಕಳಲ್ಲಿ ದೇಶಾಭಿಮಾನ ಬೆಳೆಯುತ್ತಿದೆ. ಶಿಕ್ಷಣದೊಂದಿಗೆ ಆಧ್ಯಾತ್ಮಿಕತೆಯನ್ನು ಅವರಲ್ಲಿ ಬೆಳೆಸಿ ಅವರನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸಬೇಕು. ಧಾರ್ಮಿಕ, ಯೋಗ, ವ್ಯಕ್ತಿತ್ವ ವಿಕಸನಗಳ ಕುರಿತು ಮಕ್ಕಳಿಗೆ ವಿಶೇಷ ತರಬೇತಿಯನ್ನು ನೀಡಿ ಅವರನ್ನು ಸಮಾಜ ಮುಖ್ಯವಾಹಿನಿಗೆ ತಂದು ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದರು.
ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಉದ್ಘಾಟಿಸಿದರು.
ವೇದಿಕೆ ಮೇಲೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಿಕ, ಭೀಮಗೌಡ ಪೊಲೀಸ ಪಾಟೀಲ, ಜಿ.ಆರ್.ಮಾಳಗಿ, ಜರೀನಾ ಚೌಧರಿ, ಸೂಚರಿತ ಮೊಯಿತ್ರಾ, ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಬಿ. ಜರತಾರಕರ, ಕಾರ್ಯದರ್ಶಿ ಎಸ್.ಎಮ್.ವಡೇರ, ಸದಸ್ಯರಾದ ಚಿದಾನಂದ ದೇಮಶೆಟ್ಟಿ, ಜಿ.ವಿ.ಝಂವರ, ಎಸ್.ಜಿ.ತಾಂವಶಿ, ರಾಜು ಕಲ್ಲೋಳ್ಳಿ,ವಿನೋದ ಝಂವರ, ಚಂದ್ರಕಾಂತ ಇಳಿಗೇರ, ವಿಶಾಲ ಜರತಾರಕರ, ಮುಖ್ಯೋಪಾದ್ಯಾಯಿನಿಯರಾದ ಬಿ.ಎಸ್.ಹುಬ್ಬಳ್ಳಿ, ವಾಯ್.ಎನ್. ನಣದೀಕರ ಇದ್ದರು.
ಕಾರ್ಯಕ್ರಮವನ್ನು ಎಲ್.ಎ.ವಕ್ಕುಂದ ಸ್ವಾಗತಿಸಿದರು. ಆರ್.ಎಂ.ನುಚ್ಚಿ ನಿರೂಪಿಸಿದರು. ಎಸ್.ಎ.ಸರಕಾವಸ ವಂದಿಸಿದರು.

Related posts: