ಗೋಕಾಕ:ಸಂತೋಷ ನಾಯ್ಕಕರಗೆ ಕರವೇ ವತಿಯಿಂದ ಸನ್ಮಾನ
ಸಂತೋಷ ನಾಯ್ಕಕರಗೆ ಕರವೇ ವತಿಯಿಂದ ಸನ್ಮಾನ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 13 :
ನೆರೆ ಪ್ರವಾಹದ ಸಂದರ್ಭದಲ್ಲಿ ಸ್ಥಳೀಯ ದಿವಂಗತ ದೀಪಾ ನಾಯ್ಕರ ಸೇವಾ ಸಮೀತಿಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು
ಗುರುವಾರದಂದು ನಗರದ ಹೊಸಪೇಟೆ ಗಲ್ಲಿಯಲ್ಲಿ ಕರವೇ ವತಿಯಿಂದ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಸಮೀತಿಯ ಸಂಸ್ಥಾಪಕ ಸಂತೋಷ ನಾಯ್ಕಕರ ಅವರಿಗೆ ಸತ್ಕರಿಸಿ ಅವರು ಮಾತನಾಡಿದರು
ಕಳೆದ ವರ್ಷ ಬಂದ ಅಕಾಲಿಕ ಪ್ರವಾಹದ ಸಂದರ್ಭದಲ್ಲಿ ನೆರೆ ಸಂತ್ರಸ್ತರ ನೆರೆವಿಗೆ ಧಾವಿಸಿ ಬಂದ ದಿ. ದೀಪಾ ನಾಯ್ಕರ ಸೇವಾ ಸಮಿತಿಯ ಸದಸ್ಯರು ತಮ್ಮೆಲ್ಲಾ ಕಾರ್ಯಗಳನ್ನು ಬದಿಗೋತ್ತಿ ಸಂತ್ರಸ್ತರ ಬಾಳನ್ನು ಕಟ್ಟಿಕೊಡಲು ಅವಿರತ ಪ್ರಯತ್ನಿಸಿ ಸುಮಾರು ಒಂದು ತಿಂಗಳಗಳ ಕಾಲ ಬಿದ್ದ ಮನೆಗಳನ್ನು ತೆರವುಗೊಳಿಸಿ , ನಗರಾದ್ಯಂತ ಸ್ವಚ್ಛತೆಯನ್ನು ಹಮ್ಮಿಕೊಂಡು ನೆರೆ ಸಂತ್ರಸ್ತರಿಗೆ ನೆರವಾಗಿದೆ ಇವರ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು
ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ ,ಮಂಜು ಪ್ರಭುನಟ್ಟಿ, ದತ್ತು ಕೋಲಕಾರ, ಕೃಷ್ಣಾ ಖಾನಪ್ಪನವರ, ಹನುಮಂತ ಅಮ್ಮಣಗಿ, ಮುಗುಟು ಪೈಲವಾನ, ಈರಣ್ಣಾ ನರಸಣ್ಣವರ , ಪವನ ಆಶಿ, ಮಲ್ಲು ಗುಂಡಕಲಿ, ಸಿದ್ದು .ಪಿ.ಕೆ , ಮಹೇಶ ಗಣಾಚಾರಿ, ಮುಸ್ತಾಕ ಖಂಡಾಯತ, ರಫೀಕ್ ಮುಲ್ಲಾ, ಜಾವೇದ ಸಾರವಾನ , ಸಿದ್ದಪ್ಪಾ ಯಮಕನಮರಡಿ, ಮಲ್ಲಿಕಾರ್ಜುನ ಹೊಸಪೇಟಿ
ಬಸವರಾಜ ತಿಗಡಿ ಸೇರಿದಂತೆ ಅನೇಕರು ಇದ್ದರು