RNI NO. KARKAN/2006/27779|Wednesday, February 19, 2025
You are here: Home » breaking news » ಘಟಪ್ರಭಾ:ಶಿಂದಿಕುರಬೇಟದ ಶ್ರೀ ಸಿದ್ಧರಾಮೇಶ್ವರ ಶಾಲೆಯ ವಿದ್ಯಾರ್ಥಿಗಳಿಗೆ ಅಕ್ಕಿ,ಬೆಳೆ ವಿತರಣೆ

ಘಟಪ್ರಭಾ:ಶಿಂದಿಕುರಬೇಟದ ಶ್ರೀ ಸಿದ್ಧರಾಮೇಶ್ವರ ಶಾಲೆಯ ವಿದ್ಯಾರ್ಥಿಗಳಿಗೆ ಅಕ್ಕಿ,ಬೆಳೆ ವಿತರಣೆ 

ಶಿಂದಿಕುರಬೇಟದ ಶ್ರೀ ಸಿದ್ಧರಾಮೇಶ್ವರ ಶಾಲೆಯ ವಿದ್ಯಾರ್ಥಿಗಳಿಗೆ ಅಕ್ಕಿ,ಬೆಳೆ ವಿತರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಎ 3 :

 

 

ಕೊರೊನಾ ವೈರಸ್ ಸೊಂಕು ತಡೆಗಟ್ಟಲು ಮಕ್ಕಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ರಜೆಯ ಅವಧಿಯಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಮಕ್ಕಳಿಗೆ 21 ದಿನಗಳ ಆಹಾರ ಪದಾರ್ಥಗಳಾದ ಅಕ್ಕಿ ಮತ್ತು ಬೆಳೆಗಳನ್ನು ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಸಿದ್ಧರಾಮೇಶ್ವರ ಆದರ್ಶ ಕನ್ನಡ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಶುಕ್ರವಾರ ಶಾಲೆಯ ಸ್ಥಳಿಯ ಆಡಳಿತ ಮಂಡಳಿ ಅಧ್ಯಕ್ಷ ಜ್ಯೋತೆಪ್ಪ ಬಂತಿ ವಿತರಿಸಿದರು.
ಈ ಸಂದರ್ಭದಲ್ಲಿ ಪ್ರಧಾನಗುರು ಎಂ.ಆರ್.ಕಡಕೋಳ, ಎಸ್.ಎಸ್.ಮೊಗಾನಿ, ಎಸ್.ಎಂ.ಪಾಟೀಲ, ಎಸ್.ಆರ್.ತರಾಳ ಸೇರಿದಂತೆ ಪಾಲಕರು ಉಪಸ್ಥಿತರಿದ್ದರು.

Related posts: