ಚಿಕ್ಕೋಡಿ: ಧ್ವಜಾರೋಹಣ ವೇಳೆ ಸಂಸದ , ಪರಿಷತ್ ಸದಸ್ಯ ನಡುವೆ ವಾಗ್ವಾದ : ಚಿಕ್ಕೋಡಿಯಲ್ಲಿ ಘಟನೆ
ಧ್ವಜಾರೋಹಣ ವೇಳೆ ಸಂಸದ , ಪರಿಷತ್ ಸದಸ್ಯ ನಡುವೆ ವಾಗ್ವಾದ : ಚಿಕ್ಕೋಡಿಯಲ್ಲಿ ಘಟನೆ
ಚಿಕ್ಕೋಡಿ ಅ 15: ಧ್ವಜಾರೋಹಣ ವೇಳೆ ಸಂಸದ ಪ್ರಕಾಶ ಹುಕ್ಕೇರಿ ಮತ್ತು ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರ ಮಧ್ಯೆ ಮಾತಿನ ಚಕಮಕಿ ನಡೆದು ಕೆಲಕಾಲ ಗೊಂದಲ ಉಂಟಾದ ಘಟನೆ ಇಂದು ಮುಂಜಾನೆ ಚಿಕ್ಕೋಡಿಯಲ್ಲಿ ನಡೆದಿದೆ .
ಧ್ವಜಾರೋಹಣ ನಡೆಯುತ್ತಿದ್ದ ಪಟ್ಟಣದ ಆರ್.ಡಿ. ಕಾಲೇಜು ಆವರಣದಲ್ಲಿ ಈ ದೃಶ್ಯ ಕಂಡುಬಂತು. ಖಾಸಗಿ ಕಾರ್ಯಕ್ರಮ ಇದ್ದುದರಿಂದ ಸಂಸದ ಪ್ರಕಾಶ್ ಹುಕ್ಕೇರಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದರಿಂದ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ತಹಶಿಲ್ದಾರ್ ಚಿದಂಬರ್ ಕುಲಕರ್ಣಿ ಮತ್ತು ಉಪವಿಭಾಗಾಧಿಕಾರಿ ಗೀತಾ ಕೌಲಗಿ ಅವರನ್ನು ತರಾಟೆಗೆ ತೆಗೆದುಕೊಂಡರು
ಈ ವೇಳೆ ಆಗಮಿಸಿದ ಸಂಸದ ಹುಕ್ಕೇರಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲ ಕಂಡು ಬಂತು