ಗೋಕಾಕ:ಕಸಾಪ ಅಭ್ಯರ್ಥಿ ಬಸವರಾಜ ಅವರಿಂದ ತವಗ ಹಾಗೂ ಇಂಚಲ ಗ್ರಾಮದಲ್ಲಿ ಮತಯಾಚನೆ
ಕಸಾಪ ಅಭ್ಯರ್ಥಿ ಬಸವರಾಜ ಅವರಿಂದ ತವಗ ಹಾಗೂ ಇಂಚಲ ಗ್ರಾಮದಲ್ಲಿ ಮತಯಾಚನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 9 :
ಬರುವ ಮೇ 9 ನಡೆಯುವ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸ್ವರ್ಧಿಸಿರುವ ಕನ್ನಡಪರ ಹೋರಾಟಗಾರ ಬಸವರಾಜ ಖಾನಪ್ಪನವರ ಅವರು ಶುಕ್ರವಾರದಂದು ಗೋಕಾಕ ತಾಲೂಕಿನ ತವಗ ಹಾಗೂ ಸವದತ್ತಿ ತಾಲೂಕಿನ ಇಂಚಲ ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದರು.
ತವಗ ಮಠದ ಶ್ರೀ ಬ್ರಹ್ಮಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಇಂಚಲ ಶ್ರೀಕ್ಷೇತ್ರ ಸಿದ್ದ ಸಾಧು ಸಂಸ್ಥಾನಮಠದ ಶ್ರೀ ಶಿವಾನಂದ ಭಾರತಿ ಸ್ವಾಮಿಗಳ ಆರ್ಶಿವಾದ ಪಡೆದು ಕಸಾಪ ಆಜೀವ ಸದಸ್ಯರನ್ನು ಭೇಟಿಯಾಗಿ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸಿ ಕೊಟ್ಟು ಕನ್ನಡ ತಾಯಿಯ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಾಂತೇಶ ಹಿರೇಮಠ, ಬಸವರಾಜ ಹತ್ತರಕ್ಕಿ ಸೇರಿದಂತೆ ಇತರರು ಇದ್ದರು.