ಗೋಕಾಕ:ಬಂದಿಗಳಿಗೆ ಮಾರ್ಚ 21ರಿಂದ ನೇರ ಸಂದರ್ಶನ ಪುನರಾರಂಭ : ಅಧೀಕ್ಷಕಿ ಲಕ್ಷ್ಮೀ ಹಿರೇಮಠ
ಬಂದಿಗಳಿಗೆ ಮಾರ್ಚ 21ರಿಂದ ನೇರ ಸಂದರ್ಶನ ಪುನರಾರಂಭ : ಅಧೀಕ್ಷಕಿ ಲಕ್ಷ್ಮೀ ಹಿರೇಮಠ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 24 :
ಕಾರಾಗೃಹದಲ್ಲಿನ ಬಂದಿಗಳಿಗೆ ಮಾರ್ಚ 21ರಿಂದ ನೇರ ಸಂದರ್ಶನವನ್ನು ಪುನರಾರಂಭಿಸಲಾಗುತ್ತಿದೆ ಎಂದು ಗೋಕಾಕ ನಗರದ ಕಾರಾಗೃಹ ಅಧೀಕ್ಷಕರಾದ ಲಕ್ಷ್ಮೀ ಹಿರೇಮಠ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಗಧಿತ ರಜಾ ದಿನ ಹೊರತು ಪಡಿಸಿ, ಸಂದರ್ಶನವನ್ನು ಮುಂಜಾನೆ 10.30ರಿಂದ ಮಧ್ಯಾಹ್ನ 1ಗಂಟೆಯವರೆಗೆ ಮತ್ತು ಸಂಜೆ 4ಗಂಟೆಯಿಂದ 5.30ರ ವರೆಗೆ ಸಂದರ್ಶನ ಅವಕಾಶವಿದ್ದು ಬಂಧಿಗಳ ಭೇಟಿಗೆ ಬರುವ ಕುಟುಂಬಗಳ ಸದಸ್ಯರ ಸಂಬಂಧಿಕರು ಸ್ನೇಹಿತರು ಮತ್ತು ವಕೀಲರು ಮುಂಚಿತವಾಗಿಯೆ ಕಾರಾಗೃಹದ ಮುಖ್ಯಸ್ಥರಿಗೆ ದೂರವಾಣಿ 08332-225056, 9480806478 ಮೂಲಕ ಸಂಪರ್ಕಿಸಿ ವಿವರಗಳೊಂದಿಗೆ ಸಂದರ್ಶನಕ್ಕೆ ನೊಂದಾಯಿಸಿ, ನಿಗಧಿಪಡಿಸಿದ ದಿನ ಮತ್ತು ಸಮಯಕ್ಕೆ ಸಂದರ್ಶನಕ್ಕೆ ಆಗಮಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇಮೇಲ್ ವಿಳಾಸ
tsjgkk-kar@gov.in ಸಂಪರ್ಕಿಸಬಹುದು.