ಗೋಕಾಕ:ಪವಿತ್ರ ರಂಜಾನ್ ಮಾಸದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿ : ಲಖನ್ ಜಾರಕಿಹೊಳಿ
ಪವಿತ್ರ ರಂಜಾನ್ ಮಾಸದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿ : ಲಖನ್ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 19 :
ಇಲ್ಲಿನ ಅಂಜುಮನ್ ಕಮಿಟಿ ವತಿಯಿಂದ ಸೋಮವಾರದಂದು ನಗರದ ಜಾಮೀಯಾ ಮಸೀದನಲ್ಲಿ ರಂಜಾನ್ (ರೋಜಾ) ಪ್ರಯುಕ್ತ ಹಮ್ಮಿಕೊಂಡ ಇಫ್ತಾರ್ ಕೂಟದಲ್ಲಿ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಮತ್ತು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಮತ್ತಿತರು ಭಾಗವಹಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ರಂಜಾನ ಉಪವಾಸದಲ್ಲಿ ವೈಜ್ಞಾನಿಕತೆ ಇದೆ. ವರ್ಷಕ್ಕೊಮ್ಮೆ ದೇಹದ ಸ್ವಾಸ್ಥ್ಯ ಕಪಾಡುವ ನಿಟ್ಟಿನಲ್ಲಿ ಉಪವಾಸದಂತಹ ಪದ್ಧತಿ ಸಹಕಾರಿಯಾಗಿವೆ. ಇದರೊಂದಿಗೆ ಪ್ರತಿಯೊಬ್ಬರೂ ತಮ್ಮ ಗಳಿಕೆಯ ನಿರ್ದಿಷ್ಟ ಪ್ರಮಾಣವನ್ನು ಕಡು ಬಡವರಿಗೆ ದಾನ ಮಾಡುವ ಪದ್ಧತಿ ಇತರರಿಗೆ ಮಾದರಿಯಾಗಿದೆ. ಇಂತಹ ಪವಿತ್ರ ರಂಜಾನ್ ಮಾಸದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶಾಸಕ ಲಖನ್ ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕ ಲಖನ್ ಮತ್ತು ಮುಖಂಡ ಅಂಬಿರಾವ ಪಾಟೀಲ ಅವರನ್ನು ಮುಸ್ಲಿಂ ಸಮಾಜ ಭಾಂಧವರಿಂದ ಸತ್ಕರಿಸಿ , ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮೌಲಾನಾ ಬಶೀರುಲ್ ಹಕ್ಕ ಕಾಶ್ಮಿಂ , ಹಾಜಿ ಕುತಬುದ್ದೀನ ಬಸ್ಸಾಪೂರಿ, ಹಾಜಿ ಕುತಬುದ್ದೀನ ಗೋಕಾಕ, ಅಂಜುಮನ್ ಕಮಿಟಿ ಅಧ್ಯಕ್ಷ ಜಾವೇದ ಗೋಕಾಕ, ಉಪಾಧ್ಯಕ್ಷ ಇಲಾಹಿ ಖೈರದಿ,ಅಬ್ಬಾಸ ದೇಸಾಯಿ, ಯೂಸುಫ್ ಗೋಕಾಕ, ರಫೀಕ ಗೋಕಾಕ, ರಿಯಾಜ ದೇಸಾಯಿ, ಸದಾನಂದ ಕಲಾಲ, ಜಾಕೀರ ಕುಡಚಿಕರ ಸೇರಿದಂತೆ ಸಮಾಜ ಭಾಂಧವರು ಉಪಸ್ಥಿತರಿದ್ದರು.