RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ : ಶಾಸಕ ರಮೇಶ

ಗೋಕಾಕ:ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ : ಶಾಸಕ ರಮೇಶ 

ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ : ಶಾಸಕ ರಮೇಶ

ನಮ್ಮ ಬೆಳಗಾವಿ ಇ – ವಾರ್ತೆರ ಗೋಕಾಕ ನ 21 :

ರಾಜ್ಯ ಬಿಜೆಪಿ ಸರಕಾರ ಬಡವರ ದೀನ ದಲೀತರಿಗಾಗಿ ಅನೇಕ ಸೌಲಭ್ಯಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಶಾಸಕ ರಮೇಶ ಜಾರಕಿಹೋಳಿ ತಿಳಿಸಿದರು.
ಅವರು, ಸೋಮವಾರದಂದು ತಮ್ಮ ಕಚೇರಿಯ ಆವರಣದಲ್ಲಿ 2022-23ನೇ ಎಸ್‍ಎಫ್‍ಸಿ ನಗರಸಭೆ ನಿಧಿ ಶೇ7.25% ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸೋಲಾರ ಲೈಟ್, ಎಸ್‍ಎಫ್‍ಸಿ ನಗರಸಭೆ ನಿಧಿ ಶೇ24.10% ಯೋಜನೆಯಡಿ ಎಸ್‍ಸಿ, ಎಸ್‍ಟಿ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಹಾಗೂ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಕಂಪ್ಯೂಟರಗಳನ್ನು ಮತ್ತು ನಗರಸಭೆ ನಿಧಿ ಶೇ.5% ವಿಕಲಚೇತರಿಗೆ ನಾಲ್ಕು ಮೋಟಾರ ಸೈಕಲ್ ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ ಸಿದ್ದಪ್ಪ ಹುಚ್ಚರಾಯಪ್ಪಗೋಳ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ ಸೇರಿದಂತೆ ನಗರಸಭೆ ಸದಸ್ಯರು, ಮುಕಂಡರುಗಳು ಅನೇಕರು ಉಪಸ್ಥಿತರಿದ್ದರು.

Related posts: