ಗೋಕಾಕ:ಶಿಕ್ಷಕ ಬಸವರಾಜ ಕಲ್ಲೋಳಿ ಅವರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ
ಶಿಕ್ಷಕ ಬಸವರಾಜ ಕಲ್ಲೋಳಿ ಅವರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ
ಗೋಕಾಕ ಫೆ 6 : ತಾಲೂಕಿನ ಬೆನಚಣಮರಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಸವರಾಜ ಕಲ್ಲೋಳಿಯವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ವತಿಯಿಂದ ರಾಜ್ಯ ಮಟ್ಟದ ಉತ್ತಮ ನಿಕಟ ಪೂರ್ವ ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ ನೀಡುವ “ ಶಿಕ್ಷಣ ಸೇವಾ ರತ್ನ ಪ್ರಶಸ್ತಿ” ಯನ್ನು ಬೆಂಗಳೂರಿನ ಯಲಹಂಕದ ಕೆ. ಬಿ. ಎಮ್ ಬ್ಲಾಸಮ್ ಪಬ್ಲಿಕ್ ಶಾಲೆಯಲ್ಲಿ ಫೆಬ್ರವರಿ 5 ರಂದು ಜರುಗಿದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪರಿಷತ್ ರಾಜ್ಯಾಧ್ಯಕ್ಷ ಪಿ. ಮಹೇಶ ಹಾಗೂ ಪರೀಷತ್ನ ಪದಾಧಿಕಾರಿಗಳು ಶಿಕ್ಷಕ ಸಮೂಹದವರು ಉಪಸ್ಥಿತರಿದ್ದರು.