RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ರಮೇಶ ಜಾರಕಿಹೊಳಿ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದು , ಮತದಾರರರು ಈ ಬಾರಿಯು ಅವರನ್ನು ಬೆಂಬಲಿಸುತ್ತಾರೆ : ಎಂ.ಎಲ್.ಸಿ ಗೋಪಿಚಂದ

ಗೋಕಾಕ:ರಮೇಶ ಜಾರಕಿಹೊಳಿ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದು , ಮತದಾರರರು ಈ ಬಾರಿಯು ಅವರನ್ನು ಬೆಂಬಲಿಸುತ್ತಾರೆ : ಎಂ.ಎಲ್.ಸಿ ಗೋಪಿಚಂದ 

ರಮೇಶ ಜಾರಕಿಹೊಳಿ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದು , ಮತದಾರರರು ಈ ಬಾರಿಯು ಅವರನ್ನು ಬೆಂಬಲಿಸುತ್ತಾರೆ : ಎಂ.ಎಲ್.ಸಿ ಗೋಪಿಚಂದ

ಗೋಕಾಕ ಮೇ 8 : ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ರಮೇಶ ಜಾರಕಿಹೊಳಿ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದು , ಮತದಾರರರು ಈ ಬಾರಿಯು ಅವರನ್ನು ಬೆಂಬಲಿಸಿ ಗೆಲ್ಲಿಸುತ್ತಾರೆ  ಎಂದು ಮಹಾರಾಷ್ಟ್ರ ರಾಜ್ಯದ ಎಂ.ಎಲ್.ಸಿ ಹಾಗೂ ಗೋಕಾಕ ಮತಕ್ಷೇತ್ರದ ಉಸ್ತುವಾರಿ  ಗೋಪಿಚಂದ ಪಡಳಕರ ಹೇಳಿದರು.
ಸೋಮವಾರದಂದು ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿ ಮಾತನಾಡಿದ ಅವರು ಕಳೆದ 20 ದಿನಗಳಿಂದ ಗೋಕಾಕ ಮತಕ್ಷೇತ್ರದಲ್ಲಿ ಬೇರೆ ಬೇರೆ ಸಮುದಾಯ ಜನರನ್ನು ಭೇಟಿಯಾಗಿ ನಾವು ರಮೇಶ್ ಜಾರಕಿಹೊಳಿ ಪರ ಮತಯಾಚನೆ ಮಾಡಿದ್ದು , ಜನರು ಸಹ ಬಿಜೆಪಿ ಪಕ್ಷದ ಬಗ್ಗೆ ಒಲವು ತೋರುತ್ತಿದ್ದಾರೆ. ಕೇಂದ್ರ ಬಿಜೆಪಿ  ಸರ್ಕಾರದ ಹಾಗೂ ರಾಜ್ಯ ಸರಕಾರ ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ಯೋಜನೆಗಳು ಎಲ್ಲಾ  ಸಕಾರಿಯಾಗಿವೆ . ಬರುವ ಚುನಾವಣೆಲ್ಲಿ  ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುತ್ತದೆ‌ ಉಳಿದಿರುವ ಕಾಮಗಾರಿಗಳನ್ನು ರಮೇಶ ಜಾರಕಿಹೊಳಿ ಅವರು ಮಾಡುತ್ತಾರೆ. ಕಾಂಗ್ರೆಸ್ ಮತ್ತು ದಳದಲ್ಲಿ ಇರುವವರು  ಸಹ ಬಿಜೆಪಿ ಪಕ್ಷದ ಜೊತೆ ಬನ್ನಿ, ಭಾರತವನ್ನು ಗಟ್ಟಿಯಾಗಿ ಕಟ್ಟೋಣ ಎಂದರು. ಸುಪ್ರೀಂ ನಾಯಕ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ಮಾಡಿಲ್ಲ ಎಂದ ಅವರು ರಮೇಶ್ ಜಾರಕಿಹೊಳಿ ಅವರ ಜೋತೆ ಕ್ಷೇತ್ರದ ಜನತೆಯೊಂದಿಗೆ ಒಳ್ಳೆಯ ಸಂಬಂಧ ವಿದೆ‌ ಬಿಜೆಪಿ ಪಕ್ಷದ ಕಾರ್ಯಕರ್ತರು ಸಹ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯ ಮಾಡುತ್ತಿದ್ದಾರೆ. ಭೂತ ಪ್ರಮುಖರು ಸಹ ಬಿಜೆಪಿ ಪಕ್ಷದ ಪರವಾಗಿ ಕಾರ್ಯಾ ಮಾಡುತ್ತಿದ್ದಾರೆ.  ಬರುವ ಮೇ 10 ರಂದು ಜರಗುವ ಚುನಾವಣೆ ಬಿಜೆಪಿ ಪಕ್ಷಕ್ಕೆ ಮತ ಹಾಕಿ ರಮೇಶ್ ಜಾರಕಿಹೊಳಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಭೀಮಶಿ ಭರಮನ್ನವರ, ಪ್ರಮೋದ್ ಜೋಶಿ , ರಾಜೇಶ್ವರಿ ಒಡೆಯರ್ ,  ಸುರೇಶ್ ಪತ್ತಾರ ಇದ್ದರು.

Related posts: