RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಮನುಷ್ಯ ಜೀವನದಲ್ಲಿ ಸಾರ್ಥಕ ಬದುಕು ಬದುಕಿದರೆ ಸಾಮಾಜದಲ್ಲಿ ಒಳ್ಳೆಯದನ್ನು ಸಾಧಿಸಲು ‌ಸಾಧ್ಯ : ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಜಿ

ಗೋಕಾಕ:ಮನುಷ್ಯ ಜೀವನದಲ್ಲಿ ಸಾರ್ಥಕ ಬದುಕು ಬದುಕಿದರೆ ಸಾಮಾಜದಲ್ಲಿ ಒಳ್ಳೆಯದನ್ನು ಸಾಧಿಸಲು ‌ಸಾಧ್ಯ : ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಜಿ 

ಮನುಷ್ಯ ಜೀವನದಲ್ಲಿ ಸಾರ್ಥಕ ಬದುಕು ಬದುಕಿದರೆ ಸಾಮಾಜದಲ್ಲಿ ಒಳ್ಳೆಯದನ್ನು ಸಾಧಿಸಲು ‌ಸಾಧ್ಯ : ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಜಿ

ಗೋಕಾಕ ಜು 3 : ಶರಣರ ವಿಚಾರಧಾರೆಗಳನ್ನು ಸಮಾಜಕ್ಕೆ ಮುಟ್ಟಿಸಲು ಶರಣ ಸಾಹಿತ್ಯ ಪರಿಷತ್ 1986 ರಿಂದ ರಾಜ್ಯದಲ್ಲಿ ಕಾರ್ಯಮಾಡುತ್ತದೆ ಎಂದು ಶ್ರೀಕ್ಷೇತ್ರ ಸುತ್ತೂರಿನ ವೀರ ಸಿಂಹಾಸನ ಮಹಾಸಂಸ್ಥಾನಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಹೇಳಿದರು.
ಸೋಮವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತ ತಾಲೂಕು ಘಟಕದ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಮನುಷ್ಯ ಜೀವನದಲ್ಲಿ ಸಾರ್ಥಕ ಬದುಕು ಬದುಕಿದರೆ ಸಾಮಾಜದಲ್ಲಿ ಒಳ್ಳೆಯದನ್ನು ಸಾಧಿಸಲು ‌ಸಾಧ್ಯ. ಸಮಸ್ಯೆ ಬಂದಾಗ ಜಗತ್ತಿನಲ್ಲಿ ಯಾಕೆ ಬಂದೆ ಅನಿಸುತ್ತದೆ. ಸಂತೋಷದಲ್ಲಿ ಇದ್ದಾಗ ಅದು ಮಾಯವಾಗುತ್ತದೆ. ಆದರೆ ಶರಣರು ಹಾಕಿಕೊಟ್ಟ ದಾರಿಯಲ್ಲಿ ಜೀವನ ನಡೆಸಿದರೆ ಸುಖದಿಂದ ಜೀವನ ನಡೆಸಲು ಸಾಧ್ಯ.
ಅನುಭವ ಮಂಟಪದ ಕಲ್ಪನೆ ಕೊಟ್ಟ ಬಸವಣ್ಣನವರ ಇಂದು ಸಂಸತ್ತಿನ ಲ್ಲಿ ಸ್ಥಾಪಿತವಾಗಿರುವುದು ಶಣರ ಸಾಹಿತ್ಯವನ್ನು ಎತ್ತಿ ಹಿಡಿದಂದಾಗಿದೆ. ಮನುಷ್ಯನು ಅಂತರಂಗ ಶುದ್ದಿಗೆ ಮುಂದಾಗಬೇಕು‌. ಮನುಷ್ಯ, ಹೃದಯ ಪರಿಶುದ್ಧ ಮಾಡಿಕೊಂಡು ಬಾಳಿ ಬದುಕಬೇಕು. ಆ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ ಕಾರ್ಯ ಮಾಡುತ್ತಿದೆ.
ಕೆಲಸದಲ್ಲಿ ಸಂಕಲ್ಪ ಮಾಡಿದರೆ ಮಾತ್ರ ಅಂದು ಕೊಂಡಿದ್ದನ್ನು ಸಾಧಿಸಲು ಸಾಧ್ಯ . ಆ ನಿಟ್ಟಿನಲ್ಲಿ ಎಲ್ಲಾ ಸಂಘಟನೆಗಳ ಸಹಕಾರದೊಂದಿಗೆ ಶರಣ ಸಾಹಿತ್ಯ ಪರಿಷತ್ ಕಾರ್ಯಮಾಡಿ ಶರಣ ಸಾಹಿತ್ಯವನ್ನು ಉಳಿಸಿ ಬೆಳಸುವ ಕಾರ್ಯ ಮಾಡಬೇಕು ಎಂದ ಶ್ರೀಗಳು ಇಲ್ಲಿನ ಶೂನ್ಯ ಸಂಪಾದನ ಮಠದಿಂದ ಈ ಭಾಗದಲ್ಲಿ ಶರಣ ಸಂಸ್ಕೃತಿ ಉತ್ಸವದ ಮೂಲಕ ಶರಣರ ಅನುಭಾವಗಳು ಪ್ರಚಾರ ಮಾಡುತ್ತಿದ್ದಾರೆ ಅವುಗಳ ಸದುಪಯೋಗವನ್ನು ಪಡೆದುಕೊಂಡು ಈ ಭಾಗದ ಭಕ್ತರು ಪುನಿತರಾಗಬೇಕು ಎಂದು ಹೇಳಿದರು.
ಸಮ್ಮುಖ ವಹಿಸಿದ್ದ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಶರಣ ಸಾಹಿತ್ಯವನ್ನು ಜಗತ್ತಿನಗೆ ತೋರಿಸಿದ ಬಸವಣ್ಣನವರ ಲಿಂಗಾಯತ ಕಲ್ಪನೆಯ ಜ್ಯೋತಿಯ ಪ್ರಜ್ವಲೆಯನ್ನು ಸುತ್ತೂರು ಜಗದ್ಗುರುಗಳು ಮನೆ,ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು
ಸಮ್ಮುಖ ವಹಿಸಿದ್ದ ಘೋಡಗೇರಿಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಮಾತನಾಡಿ ಶರಣ ಸಾಹಿತ್ಯ ಪ್ರಚಾರದ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸುತ್ತಿರುವ ಸುತ್ತೂರ ಮಠದ ಕಾರ್ಯಕ್ಕೆ ನಾವೆಲ್ಲರು ಕೈಜೋಡಿಸೋಣ ಎಂದರು
ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಅಶೋಕ ಮಳಗಲಿ, ತಾಲೂಕು ಘಟಕದ ಅಧ್ಯಕ್ಷ ಮಹಾಂತೇಶ ತಾವಂಶಿ, ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ಅಕ್ಕಿ, ರೋಟರಿ ರಕ್ತ ಭಂಡಾರದ ಚೇರಮನ್ ಮಲ್ಲಿಕಾರ್ಜುನ ಕಲ್ಲೋಳಿ ಇದ್ದರು.
ಕಸಾಪ ತಾಲೂಕು ಅಧ್ಯಕ್ಷೆ ಭಾರತಿ ಮದಬಾವಿ ಸ್ವಾಗತಿಸಿದರು, ಶಿಕ್ಷಕ ಆರ್.ಎಲ್.ಮಿರ್ಜಿ ನಿರೂಪಿಸಿದರು, ಕದಳಿ ಮಹಿಳಾ ತಾಲೂಕು ಅಧ್ಯಕ್ಷೆ ಜಯಾ ಚುನಮರಿ ವಂದಿಸಿದರು.

Related posts: