RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕಾಳಜಿ ಕೇಂದ್ರಕ್ಕೆ ಮೃಣಾಲ ಹೆಬ್ಬಾಳಕರ ಭೇಟಿ : ಆಹಾರ ಸಾಮಾಗ್ರಿ ವಿತರಣೆ

ಗೋಕಾಕ:ಕಾಳಜಿ ಕೇಂದ್ರಕ್ಕೆ ಮೃಣಾಲ ಹೆಬ್ಬಾಳಕರ ಭೇಟಿ : ಆಹಾರ ಸಾಮಾಗ್ರಿ ವಿತರಣೆ 

ಕಾಳಜಿ ಕೇಂದ್ರಕ್ಕೆ ಮೃಣಾಲ ಹೆಬ್ಬಾಳಕರ ಭೇಟಿ : ಆಹಾರ ಸಾಮಾಗ್ರಿ ವಿತರಣೆ
ಗೋಕಾಕ ಅ 1 : ನಗರದಲ್ಲಿ ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರಕ್ಕೆ ಗುರುವಾರದಂದು ಮೃಣಾಲ ಹೆಬ್ಬಾಳಕರ ಭೇಟಿ ನೀಡಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದವರಿಗೆ ಸ್ವಾಂತಾನ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲೆಯ ಇಬ್ಬರು ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೋಕಾಕ ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ನೀರು ನುಗ್ಗದಂತೆ ಶಾಶ್ವತ ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲಿನ ಕಾಂಗ್ರೆಸ್ ಮುಖಂಡರೊಂದಿಗೆ ಮನವಿ ಅರ್ಪಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಳಜಿ ಕೇಂದ್ರಕ್ಕೆ ಅಕ್ಕಿ ಮತ್ತು ಅಡುಗೆ ಎಣ್ಣೆಯನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಡಾ.ಮಹಾಂತೇಶ ಕಡಾಡಿ, ಚಂದ್ರಶೇಖರ್ ಕೊಣ್ಣೂರ , ದಸ್ತಗಿರಿ ಪೈಲವಾನ, ಚಂದನ ಗಿಡ್ಡನ್ನವರ, ಸಂಜೀವ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts: