ಗೋಕಾಕ :ಕಾಂಗ್ರೇಸ್ ಪಕ್ಷ ಎಲ್ಲ ಸಮುದಾಯಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ : ಸಚಿವ ರಮೇಶ
ಕಾಂಗ್ರೇಸ್ ಪಕ್ಷ ಎಲ್ಲ ಸಮುದಾಯಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ : ಸಚಿವ ರಮೇಶ
ಗೋಕಾಕ ಮೇ 3 : ಶತಮಾನಗಳ ಇತಿಹಾಸ ಹೊಂದಿರುವ ಕಾಂಗ್ರೇಸ್ ಪಕ್ಷ, ಎಲ್ಲ ಧರ್ಮಗಳನ್ನು ಗೌರವಿಸಿ, ಎಲ್ಲ ಸಮುದಾಯಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ ಎಂದು ಸಚಿವ ಹಾಗೂ ಗೋಕಾಕ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದರು.
ಬುಧವಾರದಂದು ಸಾಯಂಕಾಲ ತಾಲೂಕಿನ ಖನಗಾಂವ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿ ಮಾತನಾಡುತ್ತಾ, ಕಾಂಗ್ರೇಸ್ ಪಕ್ಷವು ತನ್ನ ಆಡಳಿತಾವಧಿಯಲ್ಲಿ ಬೃಹತ ಜಲಾಶಯಗಳ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ, ತಾಂತ್ರಿಕ ಕ್ಷೇತ್ರದ ಅಭಿವೃದ್ದಿ ಸೇರಿದಂತೆ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದರಿಂದಲೇ ದೇಶ ಇಂದು ಸಮೃದ್ದಿಯಾಗಿದೆ ಎಂದು ತಿಳಿಸಿದರು
ಬಿಜೆಪಿ ಪಕ್ಷವು ಧರ್ಮ-ಧರ್ಮಗಳ ಹಾಗೂ ಜಾತಿ-ಜಾತಿಗಳ ನಡುವೆ ಸಂಘರ್ಷಗಳನ್ನು ಏರ್ಪಡಿಸಿ, ದ್ವೇಷದ ರಾಜಕಾರಣ ಮಾಡುತ್ತಿದೆ. ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮೋಡಿ ಮಾಡುತ್ತಿದೆ. ಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿ, ಬಿಜೆಪಿಗೆ ತಕ್ಕಪಾಠ ಕಲಿಸಿ ದೇಶಕ್ಕೆ ಒಳ್ಳೇಯ ಸಂದೇಶವನ್ನು ನೀಡಿರೆಂದು ಜನತೆಯಲ್ಲಿ ಮನವಿ ಮಾಡಿದರು.
ಜನತೆಯ ಆಶೀರ್ವಾದವೇ ನಮ್ಮ ಶಕ್ತಿಯಾಗಿದ್ದು, ಆ ಶಕ್ತಿಯಿಂದಲೇ ಕ್ಷೇತ್ರದ ಅಭಿವೃದ್ದಿಯ ಜೊತೆಗೆ ನಾವು ರಾಜಕೀಯವಾಗಿ ಬೆಳೆಯುತ್ತಿದ್ದೇವೆ. ಕಳೆದ 4 ನನಗೆ ಆಶೀರ್ವದಿಸಿದಂತೆ ಈ ಬಾರಿ ತಮ್ಮ ಸೇವೆ ಮಾಡಲು ಅವಕಾಶ ನೀಡುವಂತೆ ಮತದಾರರಲ್ಲಿ ಕೋರಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಟಿ.ಆರ್.ಕಾಗಲ, ಮುಖಂಡರುಗಳಾದ ಬಸಪ್ಪ ಹಮ್ಮಣಿ, ಸಿದ್ದಗೌಡ ಪಾಟೀಲ, ನಿಂಗಪ್ಪ ಗಡಜನ್ನವರ, ಬಾಳಪ್ಪ ಇಂಚಲ, ಶಂಕರ ಹುರಕಡ್ಲಿ, ಪುಂಡಲೀಕ ವಣ್ಣೂರ, ಪ್ರಕಾಶ ತೋಳಿನವರ, ಸಿ.ಬಿ.ಕಳ್ಳಿಗುದ್ದಿ, ಮಲ್ಲಪ್ಪ ಕಡಿ, ಈಶ್ವರ ವಣ್ಣೂರ, ಶಿವಾನಂದ ಪಾಟೀಲ, ಮಲ್ಲಪ್ಪ ದೇಸಾಯಿ, ಶಿವಾಜಿ ಪೂಜಾರಿ, ರಾಮಣ್ಣ ಮರೆಪ್ಪಗೋಳ, ಈಶ್ವರ ಭಾಗೋಜಿ, ಗಂಗಪ್ಪ ಮಾರಿಹಾಳ, ಚಂದ್ರಪ್ಪ ಹಂಚಿನಮನಿ, ಮಲ್ಲಪ್ಪ ಪಾಟೀಲ, ಶಿವಪುತ್ರ ದುರದುಂಡಿ ಸೇರಿದಂತೆ ಅನೇಕರು ಇದ್ದರು.