ಬೆಳಗಾವಿ:ನಾನು ಬಳಸಿದ “ಸೇವೆ” ಪದಕ್ಕೆ ಅಪಾರ್ಥ ಬೇಡ : ಸಚಿವೆ ಜಯಮಾಲಾಗೆ ಹೆಬ್ಬಾಳಕರ ಮನವಿ
ನಾನು ಬಳಸಿದ “ಸೇವೆ” ಪದಕ್ಕೆ ಅಪಾರ್ಥ ಬೇಡ : ಸಚಿವೆ ಜಯಮಾಲಾಗೆ ಹೆಬ್ಬಾಳಕರ ಮನವಿ
ಬೆಳಗಾವಿ ಜೂ 17 : ನಾನು ಬಳಸಿದ ‘ಸೇವೆ’ ಎಂಬ ಪದದ ಬಗ್ಗೆ ಅಪಾರ್ಥ ಮಾಡಿಕೋಳ್ಳಬೇಡಿ ಎಂದು ಸಚಿವೆ ಜಯಮಾಲಾ ಅವರಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಮೀ ಹೆಬ್ಬಾಳಕರ ಮನವಿ ಮಾಡಿಕೊಂಡಿದ್ದಾರೆ
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಯಾವ ಸೇವೆ ನೋಡಿ ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂಬುದರ ಬಗ್ಗೆ ನಾನು ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದೆ. ಇದಕ್ಕೆ ಸಚಿವೆ ಜಯಮಾಲಾ ಕೂಡ ಅಸಮಾಧಾನಗೊಂಡಿದ್ದರು. ಆದರೆ ನಾನು ಬಳಸಿದ್ದ ಸೇವೆ ಪದದ ಬಗ್ಗೆ ಅಪಾರ್ಥ ಮಾಡಿಕೊಳ್ಳಬೇಡಿ ಎಂದು ಕೋರಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಸೇವೆ ಎಂದರೆ ಪಕ್ಷದ ಕೆಲಸ. ಈ ಅರ್ಥದಲ್ಲೇ ನಾನು ಆ ಪದ ಪ್ರಯೋಗಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.