RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನಿರ್ಧಿಷ್ಠ ಗುರಿಯೊಂದಿಗೆ ಪ್ರಯತ್ಮಶೀಲರಾದರೆ ಯಶಸ್ಸು ನಿಶ್ಚಿತ : ಎನ್.ಕೆ.ಮಿರಾಶೆ

ಗೋಕಾಕ:ನಿರ್ಧಿಷ್ಠ ಗುರಿಯೊಂದಿಗೆ ಪ್ರಯತ್ಮಶೀಲರಾದರೆ ಯಶಸ್ಸು ನಿಶ್ಚಿತ : ಎನ್.ಕೆ.ಮಿರಾಶೆ 

ನಿರ್ಧಿಷ್ಠ ಗುರಿಯೊಂದಿಗೆ ಪ್ರಯತ್ಮಶೀಲರಾದರೆ ಯಶಸ್ಸು ನಿಶ್ಚಿತ : ಎನ್.ಕೆ.ಮಿರಾಶೆ

ಗೋಕಾಕ ಅ 25 : ಆತ್ಮವಿಶ್ವಾಸದಿಂದ ನಿರ್ಧಿಷ್ಠ ಗುರಿಯೊಂದಿಗೆ ಪ್ರಯತ್ಮಶೀಲರಾದರೆ ಯಶಸ್ಸು ನಿಶ್ಚಿತವೆಂದು ಎಸ್.ಎಲ್.ಜೆ.ಪಿಯು ಕಾಲೇಜಿನ ಪ್ರಾಚಾರ್ಯ ಎನ್.ಕೆ.ಮಿರಾಶೆ ಹೇಳಿದರು.
ಅವರು ಶನಿವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಬಿಬಿಎ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಆತ್ಮ ವಿಶ್ವಾಸದ ಕೊರತೆಯಿಂದ ಮಾನಸಿಕವಾಗಿ ವಿದ್ಯಾರ್ಥಿಗಳು ದುರ್ಬಲವಾಗುತ್ತಾರೆ. ಆತ್ಮ ವಿಶ್ವಾಸ ದೊಂದಿಗೆ ನಿರ್ಧಿಷ್ಟ ಗುರಿ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಸಾಧಕರಾಗಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಗಳೇ ಮಹತ್ವದ ಪಾತ್ರ ವಹಿಸುತ್ತೇವೆ. ತಮ್ಮಲ್ಲಿರುವ ಕೌಶಲ್ಯಗಳ ಸದುಪಯೋಗದಿಂದ ಪ್ರತಿಭಾನ್ವಿತರಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿರೆಂದು ಕರೆ ನೀಡಿದರು.
ವೇದಿಕೆ ಮೇಲೆ ಆಡಳಿತಾಧಿಕಾರಿ ಎಸ್.ಜಿ.ಬೆಟಗಾರ, ಪ್ರಾಚಾರ್ಯ ಆರ್.ಅವಿನಾಶ, ಉಪನ್ಯಾಸಕ ಕಿರಣ ಅಂಬೇಕರ ಇದ್ದರು.
ವಿದ್ಯಾರ್ಥಿನಿಯರಾದ ಜೀನಲ್ ಸ್ವಾಗತಿಸಿದರು. ವಿದ್ಯಾ ಹಾಗೂ ಐಶ್ವರ್ಯ ನಿರೂಪಿಸಿದರು. ಸುಷ್ಮಾ ವಂದಿಸಿದರು.

Related posts: