ಗೋಕಾಕ:ಟಿಎಪಿಸಿಎಮ್ಎಸ್ ರೈತರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ : ಬಸಗೌಡ ಪಾಟೀಲ
ಟಿಎಪಿಸಿಎಮ್ಎಸ್ ರೈತರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ : ಬಸಗೌಡ ಪಾಟೀಲ
ಗೋಕಾಕ ಅ 28 : ತಾಲೂಕಿನ ರೈತರು ಬೆಳೆದ ಬೆಳಗೆ ಯೋಗ್ಯ ಬೆಲೆ ದೊರುಕುವಂತೆ ಮಾಡಿ ಅವರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಾ ಸಂಘವು ಸುದಿರ್ಘವಾಗಿ 87 ವರ್ಷಗಳನ್ನು ಪೂರೈಸಿ, ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಟಿಎಪಿಸಿಎಮ್ಎಸ್ನ ಅಧ್ಯಕ್ಷ ಬಸಗೌಡ ಪಾಟೀಲ(ನಾಗನೂರ) ಹೇಳಿದರು.
ಮಂಗಳವಾರದಂದು ನಗರದ ಗೋಕಾಕ ತಾಲೂಕಾ ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ 87 ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಂಘವು ಪ್ರಸಕ್ತ ಸಾಲಿನಲ್ಲಿ 40.ಕೋಟಿ 10 ಲಕ್ಷ ರೂಗಳ ವಹಿವಾಟು ನಡೆಸಿ 47 ಲಕ್ಷ ರೂಗಳ ನಿವ್ವಳ ಲಾಭ ಗಳಿಸಿ ಪ್ರಗತಿಯತ್ತ ದಾಪುಗಾಲು ಇಟ್ಟಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಿಠ್ಠಲ ಪಾಟೀಲ ನಿರ್ದೇಶಕರುಗಳಾದ ಸುಭಾಸ ಢವಳೇಶ್ವರ, ಈಶ್ವರ ಬೆಳಗಲಿ, ಗುರುನಾಥ ಕಂಕಣವಾಡಿ, ಅಶೋಕ ನಾಯಿಕ, ಬಿ.ಡಿ.ಪಾಟೀಲ, ಗಂಗವ್ವ ಜೈನ, ಪ್ರಭಾಕರ ಬಂಗೆನ್ನವರ,ಶಿವನಗೌಡ ಪಾಟೀಲ ಹಾಗೂ ಸಹಕಾರಿ ಅಭಿವೃದ್ದಿ ಅಧಿಕಾರಿ ಐ.ಎ.ಬೆಟಗೇರಿ ಸಹಕಾರಿ ಸಂಘ ನಿರೀಕ್ಷಕ ಎಸ್.ಬಿ.ಬಿರಾದಾರ ಪಾಟೀಲ, ಸೇರಿದಂತೆ ಸಂಘದ ಸದಸ್ಯರು ಸಿಬ್ಬಂದಿಯವರು ಇದ್ದರು.
ಸಂಘದ ಪ್ರಭಾರ ವ್ಯವಸ್ಥಾಪಕ ಎಚ್.ವಾಯ್.ಐನಾಪೂರ ಸ್ವಾಗತಿಸಿ, ವಂದಿಸಿದರು.