RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸುವರ್ಣ ಸೌಧಕ್ಕೆ ಮುತ್ತಿಗೆ : ಮಂಜುನಾಥ ಪೂಜೇರಿ ಕರೆ

ಗೋಕಾಕ:ಸುವರ್ಣ ಸೌಧಕ್ಕೆ ಮುತ್ತಿಗೆ : ಮಂಜುನಾಥ ಪೂಜೇರಿ ಕರೆ 

ಸುವರ್ಣ ಸೌಧಕ್ಕೆ ಮುತ್ತಿಗೆ : ಮಂಜುನಾಥ ಪೂಜೇರಿ ಕರೆ

ಗೋಕಾಕ ಡಿ 10 : ಸರ್ಕಾರ ಕಬ್ಬಿನ ಬಿಲ್ ಬಾಕಿ ಮತ್ತು ಪ್ರಸಕ್ತ ವರ್ಷದ ಬೆಲೆ ನಿಗದಿ ಮಾಡಲು ಮುಖ್ಯಮಂತ್ರಿಯವರ ಗಮನಕ್ಕೆ ತರಲು ಬೆಳಗಾವಿ ಅಧಿವೇಶನದಲ್ಲಿ ಸುವರ್ಣ ಸೌಧ ಮುತ್ತಿಗೆ ಹಾಕಲು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತ್ರತ್ವದಲ್ಲಿ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ರೈತರಿಗೆ ಮಂಜುನಾಥ ಪೂಜೇರಿ ಕರೆ ನೀಡಿದರು.
ಅವರು ಸೋಮವಾರದಂದು ತಾಲೂಕಿನ ಕೊಳವಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಾಮಫಲಕ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಭರಮು ಖೇಮಲಾಪೂರೆ, ಗೋಪಾಲ ಕೊಕನೂರ, ಸತ್ತೇಪ್ಪ ಮಲ್ಲಪೂರೆ, ರಾಜು ಹೂಲಿಕಟ್ಟಿ, ಮಂಜುನಾಥ ಪೂಜೇರಿ, ಯಲ್ಲಪ್ಪ ತಿಗಡಿ, ರಾಮಪ್ಪ ಡಬಾಜ, ವಿಠ್ಠಲ ತಳಕಟನಾಳ, ವಿಜಯ ಹುಲ್ಲೋಳಿ ಇದ್ದರು.

Related posts: