RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:58 ಅಭ್ಯರ್ಥಿಗಳು ಸ್ಪರ್ಧೆ ಗೊಂದಲವಾಗದಂತೆ ಜಾಗೃತಿ ಮೂಡಿಸುತ್ತಿರುವ ಬಿಜೆಪಿ ಕಾರ್ಯಕರ್ತರು

ಘಟಪ್ರಭಾ:58 ಅಭ್ಯರ್ಥಿಗಳು ಸ್ಪರ್ಧೆ ಗೊಂದಲವಾಗದಂತೆ ಜಾಗೃತಿ ಮೂಡಿಸುತ್ತಿರುವ ಬಿಜೆಪಿ ಕಾರ್ಯಕರ್ತರು 

58 ಅಭ್ಯರ್ಥಿಗಳು ಸ್ಪರ್ಧೆ ಗೊಂದಲವಾಗದಂತೆ ಜಾಗೃತಿ ಮೂಡಿಸುತ್ತಿರುವ ಬಿಜೆಪಿ ಕಾರ್ಯಕರ್ತರು

 
ನಮ್ಮ ಬೆಳಗಾವಿ ಸುದ್ದಿ, ಘಟಪ್ರಭಾ ಏ 20 :

 

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ 58 ಅಭ್ಯರ್ಥಿಗಳು ಸ್ಪರ್ಧಿಸಿರುವುದರಿಂದ ಮತದಾರರಲ್ಲಿ ಗೊಂದಲವಾಗದಂತೆ ಜಾಗೃತಿ ಮೂಡಿಸುವುದಕ್ಕಾಗಿ ಬಿಜೆಪಿ ಗೋಕಾಕ ನಗರ ಘಟಕ ಉಪಾಧ್ಯಕ್ಷ ಪ್ರವೀನ ಚುನಮರಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಅನಕು ಮತಯಂತ್ರಗಳ ಮೂಲಕ ಶನಿವಾರ ಜಾಗೃತಿ ಮೂಡಿಸಿದರು.
ಮಲ್ಲಾಪೂರ ಪಿ.ಜಿ ಪಟ್ಟಣ, ಧುಪದಾಳ ಹಾಗೂ ಶಿಂದಿಕುರಬೇಟ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತದಾನದ ಕುರಿತು ಜಾಗೃತಿ ಮೂಡಿಸಿ, ನಂತರ ಮಾತನಾಡಿದ ಚುನಮರಿ ಅವರು ಮತಯಂತ್ರದಲ್ಲಿ 58 ಅಭ್ಯರ್ಥಿಗಳಿರುವದರಿಂದ ಮತದಾರರು ಯಾವುದೆ ರೀತಿ ಗೊಂದಲಕ್ಕೆ ಒಳಗಾಗದೇ ದಿ.23 ರಂದು ನಡೆಯಲಿರುವ ಚುನಾವಣೆಯಲ್ಲಿ ಒಂದನೇ ಮತಯಂತ್ರದಲ್ಲಿ ಶೇಜ ನಂ.1ಕ್ಕೆ ಮತ ನೀಡುವ ಮೂಲಕ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿಅವರಿಗೆ ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭಲ್ಲಿ ಬಿಜೆಪಿ ಹಿರಿಯ ಕಾರ್ಯಕರ್ತರಾದ ಸುರೇಶ ಪಾಟೀಲ, ಡಾ.ವಿಜಯಕುಮಾರ ಪಾಟೀಲ, ಬಸವರಾಜ ಹತ್ತರವಾಟ, ಶೋಭಾ ಮಾರುತಿ ಬಡಿಗೇರ, ಸುಮಿತ್ರಾ ಪಾಟೀಲ, ಮಾಲಾ ಶಿವಲಿಂಗ ನಂದಗಾಂವಿ, ಸುಭಾಸ ಗಾಯಕವಾಡ, ರಾಜು ಸಿದ್ರಾಮನಿ, ಪಿಂಟು ಓಸ್ವಾಲ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

Related posts: