ಗೋಕಾಕ:ಗೋಕಾಕ ದಿಂದ ಸಂಜೆ ಬೆಳಗಾವಿ ರೈಲು ನಿಲ್ದಾಣ ಮಾರ್ಗವಾಗಿ ಖಾನಾಪೂರಕ್ಕೆ ಬಸ್ ಸೇವೆ ಆರಂಭಿಸುವಂತೆ ಪ್ರೆಸ್ ಕ್ಲಬ್ ವತಿಯಿಂದ ಮನವಿ
ಗೋಕಾಕ ದಿಂದ ಸಂಜೆ ಬೆಳಗಾವಿ ರೈಲು ನಿಲ್ದಾಣ ಮಾರ್ಗವಾಗಿ ಖಾನಾಪೂರಕ್ಕೆ ಬಸ್ ಸೇವೆ ಆರಂಭಿಸುವಂತೆ ಪ್ರೆಸ್ ಕ್ಲಬ್ ವತಿಯಿಂದ ಮನವಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು.16-
ಬೆಳಗಾವಿಯಿಂದ ನಿತ್ಯವೂ ರಾತ್ರಿ ಬೆಂಗಳೂರಿಗೆ ನೂತನವಾಗಿ ಆರಂಭಿಸಿರುವ ಸೂಪರಫಾಸ್ಟ್ ರೈಲಿಗೆ ಸಂಪರ್ಕ ಕಲ್ಪಿಸುವುದಕ್ಕಾಗಿ ದಿನಂಪ್ರತಿ ಗೋಕಾಕದಿಂದ ಸಂಜೆ ಬೆಳಗಾವಿ ರೈಲು ನಿಲ್ದಾಣ ಮಾರ್ಗವಾಗಿ ಖಾನಾಪೂರಕ್ಕೆ ಬಸ್ ಸೇವೆ ಆರಂಭಿಸುವಂತೆ ಒತ್ತಾಯಿಸಿ ಇಲ್ಲಿಯ ಪ್ರೆಸ್ ಕ್ಲಬ್ ಪದಾಧಿಕಾರಿಗಳು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಗೋಕಾಕ ಘಟಕ ವ್ಯವಸ್ಥಾಪಕರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿದ ಡಿಪೋದ ಸಹಾಯಕ ಕಾರ್ಯ ಅಧೀಕ್ಷಕ ಎ.ಎಂ.ಕಾಡರಕೊಪ್ಪ ಮತ್ತು ಸಹಾಯಕ ಸಂಚಾರ ಅಧೀಕ್ಷಕ ಸುನೀಲ ಹೊನವಾಡ ಅವರು, ಮುಂದಿನ ಕ್ರಮಕ್ಕಾಗಿ ಮನವಿ ಪತ್ರವನ್ನು ಚಿಕ್ಕೋಡಿ ಮತ್ತು ಬೆಳಗಾವಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ರವಾನಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಕಾರ್ಯದರ್ಶಿ ಬಿ. ಪ್ರಭಾಕರ (ಪ್ರವೀಣ), ಹಿರಿಯ ಪತ್ರಕರ್ತ ಎಸ್.ಬಿ.ಧಾರವಾಡಕರ, ಆರ್.ಎಮ್.ಕಲ್ಯಾಣಶೆಟ್ಟಿ, ಮಲ್ಲಪ್ಪ ದಾಸಪ್ಪಗೋಳ, ಬಸವರಾಜ ದೇಶನೂರ, ಶ್ರೀಕಾಂತ ತಾಶೀಲ್ದಾರ, ಪ್ರದೀಪ ನಾಗನೂರ, ಅಡಿವೆಪ್ಪ ಪಾಟೀಲ, ಯುನುಸ ನದಾಫ, ಸೇರಿದಂಥೆ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.