RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯ ಮಕ್ಕಳಿಗೆ ಸಹಿ ವಿತರಣೆ

ಘಟಪ್ರಭಾ:ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯ ಮಕ್ಕಳಿಗೆ ಸಹಿ ವಿತರಣೆ 

ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯ ಮಕ್ಕಳಿಗೆ ಸಹಿ ವಿತರಣೆ

 

 

ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜು 23 :

 
ಸಮೀಪದ ಹಿಡಕಲ್ ಡ್ಯಾಂನಲ್ಲಿರುವ ಶ್ರೀ ದೂಧನಾನಾ ವಿಕಾಸ ಶಿಕ್ಷಣ ಸಂಸ್ಥೆಯ ಬುದ್ಧಿ ಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಕರ್ನಾಟಕ ಯುವ ಸೇನೆ ಸಂಘಟನೆಯ ಗೋಕಾಕ ತಾಲೂಕಾ ಉಪಾಧ್ಯಕ್ಷರಾದ ವಿಠ್ಠಲ ಕುಂಬಾರ ಇವರ 41 ನೇ ಹುಟ್ಟು ಹಬ್ಬವನ್ನು ಮಕ್ಕಳಿಗೆ ಸಿಹಿ ಹಾಗೂ ಉಪಹಾರ ವಿತರಿಸುವ ಮೂಲಕ ಸೋಮವಾರ ಆಚರಿಸಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ಯುವ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷರಾದ ವೀರಣ್ಣಾ ಸಂಗಮನವರ ಮಾತನಾಡಿ, ಬುದ್ಧಿ ಮಾಂದ್ಯ ಮತ್ತು ವಿಕಲಚೇತನ ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಅವರ ಅರೈಕೆಯನ್ನು ಮಾಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘಣೀಯವಾಗಿದೆ. ಆದರೆ ಸರ್ಕಾರ ಶಾಲೆಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ಅವಶ್ಯಕತೆ ಇದೆ. ಕೂಡಲೇ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆಂಪಣ್ಣಾ ಚೌಕಶಿ, ಜಿಲ್ಲಾ ಮುಖಂಡರಾದ ಭರಮಣ್ಣಾ ಗಾಡಿವಡ್ಡರ, ಗೋಕಾಕ ತಾಲೂಕಾ ಅಧ್ಯಕ್ಷ ದಸ್ತಗೀರ ಜಮಾದಾರ, ಫರೀದಾ ಮುಲ್ಲಾ, ಸಲೀಮ ಮುಲ್ಲಾ, ರಮೇಶ ಕುಂತಕಲ್, ರಾಮಗೌಡ ಪಾಟೀಲ, ಫಿರೋಜ ತಪಕೀರ, ಫಯಾಜ ಜಮಾದಾರ, ರಾಜೇಸಾಬ ಪೀರಜಾದೆ, ಧರಮಪ್ಪಾ ಮಗದುಮ್, ಚಿದಾನಂದ ಶಿರಗಾವಿ, ಗಣೇಶ ಲಮಾಣಿ, ಸ್ವಾಮಿ ಕೋಮಾರಿ, ಮುಖ್ಯೋಪಾದ್ಯಾಯರಾದ ಬಿ.ಬಿ.ಸಂಕನ್ನವರ, ಶಿಕ್ಷಕರಾದ ಶಿವಯೋಗಿ ಸಾರಾಪೂರ, ಬಿ.ಆಯ್.ಭಜಂತ್ರಿ, ಬಿ.ಬಿ.ಮುದಗನ್ನವರ, ಆನಂದ ಕಾಂಬಳೆ, ಎಸ್.ಬಿ.ಬೇಟಗಾರ, ಆರತಿ ಗಿಡಗಾರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts: