ಗೋಕಾಕ:ಮಾಹಾ ಪ್ರವಾಹ ಹಿನ್ನೆಲೆ: ಗೋಕಾಕಿನತ್ತ ದಾವಿಸಿದ ಮಾಜಿ ಸಚಿವ ರಮೇಶ ಜಾರಕಿಹೊಳಿ
ಮಾಹಾ ಪ್ರವಾಹ ಹಿನ್ನೆಲೆ: ಗೋಕಾಕಿನತ್ತ ದಾವಿಸಿದ ಮಾಜಿ ಸಚಿವ ರಮೇಶ ಜಾರಕಿಹೊಳಿ
ಇಂದು ಮಧ್ಯಾಹ್ನದಿಂದ ನದಿ ತೀರದ ಗ್ರಾಮಗಳಿಗೆ ಮತ್ತು ಪ್ರವಾಹ ಪೀಡಿತ ಸ್ಥಳಗಳಿಗೆ ಮಾಜಿ ಸಚಿವ ರಮೇಶ ಭೇಟಿ
ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಅ 7:
ಸತತ ಮಳೆಯಿಂದ ತುಂಬಿ ಹರಿಯುತ್ತಿರುವ ಹಿಡಕಲ್ ಜಲಾಶಯದ ಒಳಹರಿವು ಹೆಚ್ಚಾಗುತ್ತಿರುವುದರಿಂದ ಬುಧವಾರದಂದು ಮಧ್ಯಾಹ್ನದಿಂದ ನದಿ ತೀರದ ಗ್ರಾಮಗಳ ಸ್ಥಿತಿಗತಿಗಳನ್ನು ಅರಿಯಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ನಗರಕ್ಕೆ ಭೇಟಿ ನೀಡಲಿದ್ದಾರೆ.
ಸದ್ಯ ಬೆಂಗಳೂರಿನಿಂದ ಗೋಕಾಕಿನತ್ತ ಹೋರಟಿರುವ ಅವರು ಮಧ್ಯಾಹ್ನದ ವರೆಗೆ ಗೋಕಾಕ ನಗರವನ್ನು ತಲುಪಲಿದ್ದಾರೆ. ಪ್ರವಾಹಕ್ಕೆ ತುತ್ತಾಗಿರುವ ನಗರ ಪ್ರದೇಶದ ಸ್ಥಳಗಳಿಗೆ ಮತ್ತು ಗ್ರಾಮೀಣ ಪ್ರದೇಶದ ಪ್ರವಾಹ ಪೀಡಿತ ಸ್ಥಳಗಳನ್ನು ಮಾಜಿ ಸಚಿವ ರಮೇಶ ವಿಕ್ಷಣೆ ಮಾಡಿಲ್ಲಿದ್ದಾರೆ. ಎಂದು ಅವರ ಆಪ್ತ ಬಳಗದವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ .