RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ: ಅಡಿಬಟ್ಟಿ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿದ್ದ 81 ವರ್ಷದ ವಯೋವೃದ್ದನ ರಕ್ಷಣೆ

ಗೋಕಾಕ: ಅಡಿಬಟ್ಟಿ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿದ್ದ 81 ವರ್ಷದ ವಯೋವೃದ್ದನ ರಕ್ಷಣೆ 

ಪ್ರವಾಹದಲ್ಲಿ ಸಿಲುಕಿದ್ದ ಬಸಪ್ಪ ಬೀರನಗಡ್ಡಿ ಅವರನ್ನು ಬೋಟಿನಲ್ಲಿ ಸುರಕ್ಷಿತವಾಗಿ ಕರೆತರುತ್ತಿರುವದು

ಅಡಿಬಟ್ಟಿ     ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿದ್ದ 81 ವರ್ಷದ ವಯೋವೃದ್ದನ ರಕ್ಷಣೆ

 

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 9 :

 

 
ಕಳೆದ ನಾಲ್ಕು ದಿನಗಳಿಂದ ಬಿಟ್ಟುಬಿಡದ ಮಳೆಯಿಂದ ಜಲಾವೃತ ಗೊಂಡಿರುವ ಗೋಕಾಕ ತಾಲೂಕು ಅಕ್ಷರಶಃ ತಲ್ಲಣಗೊಂಡಿದೆ. ಹಲವಾರು ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು ಪ್ರವಾಹದಲ್ಲಿ ಸಿಲುಕಿರುವ ಜನರು ಹೋರ ಬರಲು ಪರದಾಡುತ್ತಿರುವ ಸಂದರ್ಭದಲ್ಲಿ ಗೋಕಾಕ ತಾಲೂಕಿನ ಅಡಿಬಟ್ಟಿ ಗ್ರಾಮದಲ್ಲಿ 81 ವರ್ಷದ ಬಸಪ್ಪ ಬೀರನಗಡ್ಡಿ ಪ್ರವಾಹದ ಸೆಳುವಿಗೆ ವಿಠಲ ದೇವಸ್ಥಾನದಲ್ಲಿ ಮೇಲೆ ಸಿಲುಕಿ ರಕ್ಷಣೆಯನ್ನು ಎದುರು ನೋಡುತ್ತಿದ್ದರು

ಅಡಿಬಟ್ಟಿ ವಿಠಲ ದೇವಸ್ಥಾನದ ಮೇಲೆ ಸಿಲುಕಿರುವ ವಯೋವೃದ್ದರ ಬಸಪ್ಪ ಬೀರನಗಡ್ಡಿ

ಇದೇ ಸಂದರ್ಭದಲ್ಲಿ ಸಿಪಿಐ ಶ್ರೀಧರ ಸತಾರೆ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗೆ ಇಳಿದ ಎಸ್.ಟಿ. ಎಫ್ ತಂಡ, ಪೊಲೀಸ್ ಸಿಬ್ಬಂದಿಗಳು ಹಾಗೂ ಅಲ್ಲಿಯ ಸ್ಥಳೀಯರು ಡ್ರೋನ್ ಕ್ಯಾಮೆರಾ ಮತ್ತು ಯಂತ್ರಚಾಲಿತ ಬೋಟ್ ಮೂಲಕ ಎರೆಡು ಕಿ.ಮಿ ಕ್ರಮಿಸಿ ಅವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.

ಕಾರ್ಯಚರಣೆಯಲ್ಲಿ ಈರಣ್ಣಾ ದೇಸಾಯಿ,ಮಲ್ಲಿಕಾರ್ಜುನ ಶಿಂತ್ರೆ, ಶಂಕರ ಯಮಕನಮರಡಿ ಸೇರಿದಂತೆ ಇತರು ಭಾಗವಹಿಸಿದ್ದರು

Related posts: