ಗೋಕಾಕ:ಹೆಜ್ಜೆ ಹಾಕದ ಲಕ್ಷ್ಮೀ, ಮಾಸ್ಕ ಹಾಕಿ ನೆರೆ ಸಂತ್ರಸ್ತರ ಅಹವಾಲು ಆಲಿಸಿದ ಮಾಜಿ ಸಿ.ಎಂ ಸಿದ್ದರಾಮಯ್ಯ
ಹೆಜ್ಜೆ ಹಾಕದ ಲಕ್ಷ್ಮೀ, ಮಾಸ್ಕ ಹಾಕಿ ನೆರೆ ಸಂತ್ರಸ್ತರ ಅಹವಾಲು ಆಲಿಸಿದ ಮಾಜಿ ಸಿ.ಎಂ ಸಿದ್ದರಾಮಯ್ಯ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 28 :
ನೆರೆ ಹಾವಳಿಯಿಂದ ಹಾನಿಗೆ ಒಳಗಾದ ಗೋಕಾಕ ನಗರದ ನೆರೆ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿ , ನೆರೆ ಸಂತ್ರಸ್ತರಿಗೆ ಸಮಾಧಾನ ಹೇಳಲು ನಗರಕ್ಕೆ ಬಂದಿದ್ದ ಮಾಜಿ ಸಿ.ಎಂ ಸಿದ್ದರಾಮಯ್ಯ ಮಾಸ್ಕ ಧರಿಸಿಕೊಂಡು ತಿರುಗಾಡಿದ ಘಟನೆ ನಡೆದಿದೆ
ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಸೂರು ಕಳೆದುಕೊಂಡು ಬದುಕು ಕಟ್ಟಿಕೊಳ್ಳಲು ಹಾತೋರೆಯುತ್ತಿರುವ ಸಂದರ್ಭದಲ್ಲಿ ಸಂತ್ರಸ್ತರ ಭೇಟಿಗೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಗಿಗೆ ಮಾಸ್ಕ ಧರಿಸಿ ಸಂತ್ರಸ್ತರ ಅಹವಾಲು ಆಲಿಸಿ ಸುದ್ದಿಯಾಗಿದ್ದಾರೆ .
ನಗರದ ವಡ್ಡರ ಓಣಿ, ಉಪ್ಪಾರ ಓಣಿ,ಡೋರ ಓಣಿ, ಮಟನ್ ಮಾರ್ಕೆಟ್ ಪ್ರದೇಶಗಳನ್ನು ವಿಕ್ಷೀಸಿದ ಸಿದ್ದರಾಮಯ್ಯ ಮಾಸ್ಕ ಧರಿಸಿಯೆ ಪರಿಶೀಲನೆ ನಡೆಯಿಸಿ ಹೋದರು
ಸಿದ್ದರಾಮಯ್ಯ ಜೊತೆಯಲ್ಲಿ ಪ್ರವಾಹ ಪ್ರದೇಶಗಳನ್ನು ವಿಕ್ಷೀಸಲು ಬಂದಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಮಾತ್ರ ಗೋಕಾಕ ನಗರದ ಗುರುವಾರ ಪೇಠೆಯ ಲಕ್ಷ್ಮೀ ದೇವಸ್ಥಾನದಲ್ಲಿ ಸಂತ್ರರನ್ನು ಮಾತನಾಡಿಸಿ ಮಾಜಿ ಸಿ.ಎಂ ಸಿದ್ದರಾಮಯ್ಯ ಅವರೊಂದಿಗೆ ಹೆಜ್ಜೆ ಹಾಕದೆ ಕಾರಿನಲ್ಲಿಯೆ ಕುಳಿತು ಚರ್ಚೆಗೆ ಗ್ರಾಸವಾದರು .