RNI NO. KARKAN/2006/27779|Friday, October 18, 2024
You are here: Home » breaking news » ಅರಬಾಂವಿ:ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ಧಿಗೆ ಒತ್ತು : ಅಡಿವೆಪ್ಪ ಬಿಲಕುಂದಿ

ಅರಬಾಂವಿ:ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ಧಿಗೆ ಒತ್ತು : ಅಡಿವೆಪ್ಪ ಬಿಲಕುಂದಿ 

ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಅಭಿವೃದ್ಧಿಗೆ ಒತ್ತು : ಅಡಿವೆಪ್ಪ ಬಿಲಕುಂದಿ

ಗೋಕಾಕ ಜು 20: 2016-17 ನೇ ಸಾಲಿನ 14 ನೇ ಹಣಕಾಸು ಯೋಜನೆಯ ಸಾಮಾನ್ಯ ಕಾರ್ಯಾದಾರಿತ ಅನುದಾನದಡಿಯಲ್ಲಿ ತಾಲೂಕಿನ ಅರಭಾಂವಿ ಪಟ್ಟಣ 8 ನೇ ವಾರ್ಡಿನ ಕಾಂಕ್ರೀಟ್ ಸಿಸಿ, ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರದಂದು ಪ.ಪಂ ಸದಸ್ಯ ಹಾಗೂ ನ್ಯಾಯವಾದಿ ಅಡಿವೆಪ್ಪ ಬಿಲಕುಂದಿ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಎಲ್ಲ ಸದಸ್ಯರು ಕೂಡಿಕೊಂಡು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಪಟ್ಟಣದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕುಮಾರ ಪೂಜೇರಿ, ಮುತ್ತೇಪ್ಪ ಝಲ್ಲಿ, ಮಹಾಂತೇಶ ನೇಮಗೌಡರ, ಲಕ್ಷ್ಮಣ ಝಲ್ಲಿ, ಬಸಪ್ಪ ಹನುಮಸಾಗರ, ಲಕ್ಷ್ಮಣ ನಿಂಗನ್ನವರ, ರವಿ ಹುಕ್ಕಿ, ವಿಠ್ಠಲ ಸಂತುಗೋಳ, ಈರಪ್ಪ ಹೊಲದವರ, ವಿಠ್ಠಲ ದೇವುಗೋಳ, ಅಶೋಕ ಗುಜನಟ್ಟಿ, ಪ.ಪಂ ಮುಖ್ಯಾಧಿಕಾರಿ ಕೆ.ಬಿ.ಬೆಣ್ಣಿ ಸೇರಿದಂತೆ ಹಲವರು ಇದ್ದರು.

Related posts: