RNI NO. KARKAN/2006/27779|Friday, October 18, 2024
You are here: Home » breaking news » ಬೆಳಗಾವಿ:ಡಿ.ಕೆ ಶಿವಕುಮಾರ್ ನಾನು ಇಬ್ಬರು ಒಳ್ಳೆಯ ಸ್ನೇಹಿತರು , ನಾವು ಸೇಡಿನ ರಾಜಕಾರಣ ಮಾಡುತ್ತಿಲ್ಲ : ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ

ಬೆಳಗಾವಿ:ಡಿ.ಕೆ ಶಿವಕುಮಾರ್ ನಾನು ಇಬ್ಬರು ಒಳ್ಳೆಯ ಸ್ನೇಹಿತರು , ನಾವು ಸೇಡಿನ ರಾಜಕಾರಣ ಮಾಡುತ್ತಿಲ್ಲ : ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ 

ಡಿ.ಕೆ ಶಿವಕುಮಾರ್ ನಾನು ಇಬ್ಬರು ಒಳ್ಳೆಯ ಸ್ನೇಹಿತರು , ನಾವು ಸೇಡಿನ ರಾಜಕಾರಣ ಮಾಡುತ್ತಿಲ್ಲ : ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ

ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಸೆ 4  : 

ಬೆಳಗಾವಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಣ್ಣ ನೀರಾವರಿ  ಸಚಿವ ಮಾಧುಸ್ವಾಮಿ, ಡಿಕೆಶಿ ಅರೆಸ್ಟ್ ವಿಚಾರದ ಕುರಿತು ಮಾತನಾಡಿದ್ದು, ನಾವು ಸೇಡಿನ ರಾಜಕಾರಣ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಸೇಡಿನ ರಾಜಕಾರಣ ಮಾಡುವ ಕಾರಣ ಯಾವುದು ಬಿಜೆಪಿಗೆ ಇಲ್ಲ. ಕಾನೂನಿನ ಕ್ರಮ ಜರುಗಿಸಿದಾಗ ಅಧಿಕಾರದಲ್ಲಿರುವ ಸರ್ಕಾರದ ವಿರುದ್ಧ ಆರೋಪ ಮಾಡುವುದು ಸಹಜ ಎಂದು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಪ್ರತಿಕ್ರಿಯಿಸಿದರು.

ಈ ಬಗ್ಗೆ ಮಾತನಾಡಿದ ಮಾಧುಸ್ವಾಮಿ, ಡಿ.ಕೆ ಶಿವಕುಮಾರ್ ನಾನು ಇಬ್ಬರು ಒಳ್ಳೆಯ ಸ್ನೇಹಿತರು. ಡಿಕೆ ಶಿವಕುಮಾರ್ ತಪ್ಪು ಮಾಡಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಇಡಿ ಅಧಿಕಾರಿಗಳು ಹೇಳಿದ್ದು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆದರೆ ಡಿ.ಕೆ. ಶಿವಕುಮಾರ್ ತನಿಖೆಗೆ ಸಹಕರಿಸಬೇಕಿತ್ತು ಎಂದು ಅವರು ನುಡಿದರು.

Related posts: