RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಹೋದರಿಗೆ ಸೆಡ್ಡು ಹೊಡೆಯಲು ರೆಡಿ ಆಯಿತು ವೇದಿಕೆ : ಮಾಜಿ ಸಚಿವ ರಮೇಶ ಅಭಿಮಾನಿಗಳಿಂದ ನಾಳೆ ಸಂಕಲ್ಪ ಸಮಾವೇಶ

ಗೋಕಾಕ:ಸಹೋದರಿಗೆ ಸೆಡ್ಡು ಹೊಡೆಯಲು ರೆಡಿ ಆಯಿತು ವೇದಿಕೆ : ಮಾಜಿ ಸಚಿವ ರಮೇಶ ಅಭಿಮಾನಿಗಳಿಂದ ನಾಳೆ ಸಂಕಲ್ಪ ಸಮಾವೇಶ 

ಸಹೋದರಿಗೆ ಸೆಡ್ಡು ಹೊಡೆಯಲು ರೆಡಿ ಆಯಿತು ವೇದಿಕೆ : ಮಾಜಿ ಸಚಿವ ರಮೇಶ ಅಭಿಮಾನಿಗಳಿಂದ ನಾಳೆ ಸಂಕಲ್ಪ ಸಮಾವೇಶ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 6 :

 
ಶಾಸಕತ್ವದ ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಬಾಗಿಲು ತಟ್ಟಿ ಕಾನೂನು ಹೋರಾಟ ನಡೆಸುತ್ತಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಅಭಿಮಾನಿಗಳು ಸಂಘಟಿಸಿರುವ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ

ಶನಿವಾರದಂದು ಮಾಜಿ ಸಚಿವರ ಕಾರ್ಯಾಲಯದ ಎದುರು ನಡೆಯುವ ಸಂಕಲ್ಪ ಸಮಾವೇಶದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಇದಕ್ಕಾಗಿ ಅವರ ಅಭಿಮಾನಿಗಳು ಈಗಾಗಲೇ ತಯಾರಿಗಳನ್ನು ನಡೆಸಿದ್ದಾರೆ

ಗೋಕಾಕ ಮತಕ್ಷೇತ್ರ ಹಿಂದೆಂದು ಕಂಡು ಕಾಣಲಾರದ ಜಲ ಪ್ರವಾಹಕ್ಕೆ ತುತ್ತಾಗಿ ಭಾರಿ ಪ್ರಮಾಣದ ಹಾನಿಯನ್ನುಂಟು ಮಾಡಿದರು ಮಾಜಿ ಸಚಿವರು ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ ಎಂದು ಅವರ ರಾಜಕೀಯ ವಿರೋಧಿಗಳು ಬಣ್ಣಿಸುತ್ತಿರುವ ಸಂದರ್ಭದಲ್ಲಿ ಮಾಜಿ ಸಚಿವರ ಗೋಕಾಕದಲ್ಲಿ ಸಮಾವೇಶ ನಡೆಸುತ್ತಿರುವದು ಅವರ ವಿರೋಧಿಗಳಲ್ಲಿ ನಡುಗನ್ನು ಹುಟ್ಟಿಸಿದೆ

ಸಹೋದರರ ವಿರುದ್ಧ ಹರಿಹಾಯ್ತಾರಾ ರಮೇಶ ? : ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಮಾಣದ ಚರ್ಚೆಗೆ ಗ್ರಾಸ ಒದಗಿಸಿದೆ. ಈಗಾಗಲೇ ನಗರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಾಜಿ ಸಚಿವ ರಮೇಶ ಅವರ ಸಹೋದರ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ತಮ್ಮ ಸ್ವಚ್ಚತಾ ಕಾರ್ಯ ಕೈಗೊಂಡು ಮೋನ್ನೆಯಷ್ಟೆ ಪ್ರವಾಹ ಪೀಡಿತ ಜನರನ್ನು ಸೇರಿಸಿ ಕಾರ್ಯಕ್ರಮವನ್ನು ಸಂಘಟಿಸಿ ಸಹೋದರ ಮಾಜಿ ಸಚಿವ ರಮೇಶ ನಡೆಯನ್ನು ಖಂಡಿಸಿ ಅವರ ವಿರುದ್ಧ ಹರಿಹಾಯ್ದಿದ್ದರು ಇದು ರಮೇಶ ಜಾರಕಿಹೊಳಿ ಅವರ ಅಭಿಮಾನಿ ಬಳಗಕ್ಕೆ ಇರುಸು ಮುರುಸಾಗಿಸಿತ್ತು ಆ ಕಾರಣಕ್ಕಾಗಿ ಇವರ ಅಭಿಮಾನಿಗಳು ಸಂಕಲ್ಪ ಸಮಾವೇಶವನ್ನು ಸಂಘಟಿಸಿದ್ದಾರೆ ಎಂದು ಹೇಳಲಾಗುತ್ತಿದ್ದು ಅವರ ರಾಜಕೀಯ ನಡೆಯನ್ನು ಪ್ರಶ್ನಿಸಿ ಟೀಕೆಗಳನ್ನು ಮಾಡುವವರಿಗೆ ನಾಳಿನ ಸಮಾವೇಶದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಣ್ಣಿಸಲಾಗುತ್ತಿದ್ದೆ

ಉಪ ಚುನಾವಣೆ ತಯಾರಿ : ಶಾಸಕ ಸ್ಥಾನದಿಂದ ಅರ್ನಹವಾದ ಹಿನ್ನೆಲೆಯಲ್ಲಿ ಯಾವುದೆ ಸಂದರ್ಭದಲ್ಲಿ ಗೋಕಾಕ ಕ್ಷೇತ್ರಕ್ಕೆ ಚುನಾವಣೆ ಎದುರಾಗುವ ಸಂಭವವಿದ್ದು ಅದರ ತಯಾರಿಗೆ ಮುಖಂಡರೊಂದಿಗೆ ಚರ್ಚಿಸಲಿದ್ದು , ನ್ಯಾಯಾಲಯದಲ್ಲಿ ತೀರ್ಪು ತಡೆವಾದ ಪಕ್ಷದಲ್ಲಿ ತಮ್ಮ ಸ್ಥಾನಕ್ಕೆ ಯಾರನ್ನು ಸಿದ್ದಗೋಳಿಸಬೇಕು ಎಂಬುದರ ಬಗ್ಗೆಯೂ ಸಹ ನಾಳೆ ಚರ್ಚಿಸುವ ಸಂಭವವಿದೆ.

ಒಟ್ಟಾರೆಯಾಗಿ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ನಾಳೆ ನಡೆಸಲು ಉದ್ದೇಶಿಸಿರುವ ಸಂಕಲ್ಪ ಸಮಾವೇಶ ಯಾರಿಗೆ ಸಿಹಿ ಮತ್ತು ಯಾರಿಗೆ ಕಹಿ ಯಾಗಲಿದೆ ಎಂಬುದನ್ನು ಕಾಯ್ದು ನೋಡಬೇಕಷ್ಷೆ .

Related posts: