RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಒಂದು ಲಕ್ಷ ಜ‌ನ ಕೂಡಿಸಿ ಸೋಮವಾರ ನಾಮಪತ್ರ ಸಲ್ಲಿಕೆ , ಇಂದು ಲಖನ್ ಭೇಟಿ : ಮಾಜಿ ಸಚಿವ ರಮೇಶ ಹೇಳಿಕೆ

ಗೋಕಾಕ:ಒಂದು ಲಕ್ಷ ಜ‌ನ ಕೂಡಿಸಿ ಸೋಮವಾರ ನಾಮಪತ್ರ ಸಲ್ಲಿಕೆ , ಇಂದು ಲಖನ್ ಭೇಟಿ : ಮಾಜಿ ಸಚಿವ ರಮೇಶ ಹೇಳಿಕೆ 

ಒಂದು ಲಕ್ಷ ಜ‌ನ ಕೂಡಿಸಿ ಸೋಮವಾರ ನಾಮಪತ್ರ ಸಲ್ಲಿಕೆ , ಇಂದು ಲಖನ್ ಭೇಟಿ : ಮಾಜಿ ಸಚಿವ ರಮೇಶ ಹೇಳಿಕೆ

 

 

ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಸೆ 26 :

 

 

ಒಂದು ಲಕ್ಷ ಜನರನ್ನು ಸೇರಿಸಿ ಸೋಮವಾರ ನಾಮಪತ್ರ ಸಲ್ಲಿಸಲಾಗುವದು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಸಾರಿ ಮತಕ್ಷೇತ್ರದ ಜನರಿಗೆ ಹುಮ್ಮಸು ಬಂದಿದೆ ಹೀಗಾಗಿ ಒಂದು ಲಕ್ಷ ಜನ ಸೇರಿಸುತ್ತಿದ್ದೇವೆ.ಉಚ್ಛ ನ್ಯಾಯಾಲಯದ ಮೇಲೆ ಸಂಪೂರ್ಣವಾಗಿ ವಿಶ್ವಾಸವಿದೆ ನಾಳೆ ಸಾಯಂಕಾಲದವರೆಗೆ ತೀರ್ಪು ನಮ್ಮ ಪರವಾಗಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಕ್ಷೇತ್ರದ ಜನರು ಸ್ವಲ್ಪ ಕನ್ಪೂಸ್ ಇದ್ದಾರೆ ಅದಕ್ಕಾಗಿ ಇಂದು ಸಭೆ ಕರೆದು ಚರ್ಚಿಸುತ್ತಿದ್ದೇನೆ ಎಂದು ಹೇಳಿದ ರಮೇಶ ಜಾರಕಿಹೊಳಿ ತುಘಲಕ್ ರಮೇಶ್ ಕುಮಾರ್ ವಾದ ಪ್ರಕಾರ ನಾವು ಚುನಾವಣೆಗೆ ನಿಲ್ಲಲು ಬರುವುದಿಲ್ಲ.
ಪೆಬ್ರುವರಿಯಲ್ಲಿ ವಿಪ್ ಕೊಟ್ಟಿದ್ದಕ್ಕೆ ನಾನು ಅಧಿವೇಶನಕ್ಕೆ ಹಾಜರಾಗಿದ್ದೇನೆ.ಆ ವಿಪ್ ಅಲ್ಲಿಯೇ ಮುಕ್ತಾಯವಾಗಿದೆ.
ಮಗಳ ಮದುವೆಗೆ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಸ್ವತಃ ಅವರೇ ಹೇಳಿದ್ದರು.ಕುತಂತ್ರದಿಂದ ಹಲವು ಸಾಕ್ಷಿ ಸಿದ್ದಪಡಿಸಿರುವ ರಮೇಶ್ ಕುಮಾರ್ ಸಿದ್ದರಾಮಯ್ಯನವರ ಏಜೆಂಟರಂತೆ ಕೆಲಸ ಮಾಡಿದ್ದಾರೆ ಎಂದು ರಮೇಶ ಜಾರಕಿಹೊಳಿ ಮಾಜಿ ಸ್ಪೀಕರ್ ರಮೇಶ ಕುಮಾರ ವಿರುದ್ಧ ಕಿಡಿಕಾರಿದರು

ಇಂದು ಲಖನ್ ಜಾರಕಿಹೊಳಿ ಭೇಟಿ :

ಹಿರಿಯ ಅಣ್ಣನಾಗಿ ನಾನು ಲಖನ್ ಭೇಟಿ ಮಾಡಿ ಸ್ಪರ್ಧೆ ಮಾಡದಂತೆ ಹೇಳುತ್ತೇನೆ.ಇಂದಿಗೂ ಲಖನ್ ಮೇಲೆ ಪ್ರೀತಿ ಇದೆ ಲಖನ್ ಸ್ಟ್ಯಾಂಡ್ ತಿಳಿಯುತ್ತಿಲ್ಲ ಈಗ ಸುಮ್ಮನೆ ಕುಳಿತುಕೊಳ್ಳಲಿ ಮುಂದಿನ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರ ಬಿಟ್ಟು ಕೊಟ್ಟು ನಾನು ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸಿ ಸತೀಶ ತಾಕತ್ ನೋಡುತ್ತೇನೆ.ನನ್ನ ಮೇಲೆ ಯಾವುದೇ ಹಗರಣ ಇಲ್ಲ ಹೀಗಾಗಿ ಅಳಿಯನ ಮೇಲೆ ವಾಗ್ದಾಳಿ ಮಾಡುತ್ತಿದ್ದಾರೆ. ಅಳಿಯ ಮೇಲೆ ಯಾವುದೇ ಆರೋಪ ಸಾಬೀತಾದ್ದರೆ ಅವರನ್ನು ಹೋರಗೆ ಹಾಕಲು ಸಿದ್ಧವೆಂದು ಸಹೋದರರಿಗೆ ತಿರುಗೇಟು ನೀಡಿದರು

Related posts: