ಗೋಕಾಕ:ಬೆಳಕು ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ರಜನಿ ಜಿರಗ್ಯಾಳ ಆಯ್ಕೆ
ಬೆಳಕು ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ರಜನಿ ಜಿರಗ್ಯಾಳ ಆಯ್ಕೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 26 :
ಬೆಂಗಳೂರಿನ ಬೆಳಕು ಸಂಸ್ಥೆಯವರು 13/10/2019 ರಂದು ಬೆಂಗಳೂರಿನ ಗುಪ್ತಾ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿರುವ ಅಖಿಲ ಕರ್ನಾಟಕ ಬೆಳಕು ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ನಗರದ ಕಲಾವಿದೆ, ಸಾಹಿತಿ ಹಾಗೂ ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯ ಉಪಾಧ್ಯಕ್ಷೆ ರಜನಿ ಜಿರಗ್ಯಾಳ ಆಯ್ಕೆಮಾಡಿ ಬುಧವಾರದಂದು ನಗರದಲ್ಲಿ ಸನ್ಮಾನಿಸಿ ಆಮಂತ್ರಿಸಿದರು
ಈ ಸಂದರ್ಭದಲ್ಲಿ ಬೆಳಕು ಸಂಸ್ಥೆಯ ಗೌರವ ಕಾರ್ಯದರ್ಶಿ ಮೃತ್ಯುಂಜಯ ಪಾಟೀಲ ಸದಸ್ಯರಾದ ಸೋಮನಾಥ ಮಗದುಮ್ಮ, ಈಶ್ವರ ಮಮದಾಪೂರ, ಈಶ್ವರಚಂದ್ರ ಬೆಟಗೇರಿ, ಸಾಹಿತಿ ಮಹಾಲಿಂಗ ಮಂಗಿ ,ಸಿರಿಗನ್ನಡ ವೇದಿಕೆ ಪದಾಧಿಕಾರಿಗಳಾದ ಸಂಗೀತಾ ಬನ್ನೂರ ,ವೇಶಾಲಿ ಭರಭರಿ,ಛಾಯಾ ಸಿದ್ದರಾಯ,ಜಯಾ ಚುನಮರಿ, ಪ್ರೇಮ ಜಕ್ಕನ್ನವರ,ಸುಮಾ ಮದಿಹಳ್ಳಿ ಇದ್ದರು