ಗೋಕಾಕ:ಶೂನ್ಯ ಸಂಪಾದನ ಮಠಕ್ಕೆ ಡಾ ಭೀಮಶಿ ಜಾರಕಿಹೊಳಿ ಭೇಟಿ
ಶೂನ್ಯ ಸಂಪಾದನ ಮಠಕ್ಕೆ ಡಾ ಭೀಮಶಿ ಜಾರಕಿಹೊಳಿ ಭೇಟಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 22 :
ಇಲ್ಲಿಯ ಶ್ಯೂನ ಸಂಪಾದನ ಮಠಕ್ಕೆ ಬಿಜೆಪಿ ಮುಖಂಡ ಡಾ. ಭೀಮಶಿ ಜಾರಕಿಹೊಳಿ ಭೇಟಿ ನೀಡಿ ಮುರಘರಾಜೇಂದ್ರ ಮಹಾಸ್ವಾಮಿಗಳೊಂದಿಗೆ ಸಮಾಲೋಚನೆ ನಡೆಯಿಸಿದರು
ಶುಕ್ರವಾರದಂದು ಸಾಯಂಕಾಲ ನಗರದ ಶೂನ್ಯ ಸಂಪಾದನ ಮಠಕ್ಕೆ ಬೇಟಿ ನೀಡಿದರು ಇದೇ ಸಂದರ್ಭದಲ್ಲಿ ಡಾ.ಭೀಮಶಿ ಜಾರಕಿಹೊಳಿ ಅವರನ್ನು ಶ್ರೀ ಮಠದ ವತಿಯಿಂದ ಗೌರವಿಸಿ ಸತ್ಕರಿಸಲಾಯಿತು
ನಿನ್ನೆಯಷ್ಟೇ ಶ್ರೀಮಠಕ್ಕೆ ಬೇಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಮುರಘರಾಜೇಂದ್ರ ಮಹಾಸ್ವಾಮಿಗಳ ಆರ್ಶಿವಾದ ಪಡೆದಿದ್ದ ಬೆನ್ನಲೇ ಡಾ.ಭೀಮಶಿ ಜಾರಕಿಹೊಳಿ ಬೇಟಿ ಕುತೂಹಲ ಕೆರಳಿಸಿದೆ
ಈ ಸಂದರ್ಭದಲ್ಲಿ ಶಿವಾನಂದ ಪಾಟೀಲ , ಮುರಗೇಶ ಹುಕ್ಕೇರಿ, ಮಾಯಪ್ಪ ತಹಶೀಲ್ದಾರ್ , ಸಂಜು ಗಾಣಿಗೇರ , ಸಂಜು ಮುಳಗುಂದ ಸೇರಿದಂತೆ ಇತರರು ಇದ್ದರು