ಗೋಕಾಕ:ಜನತೆಯ ಆಶೀರ್ವಾದದಿಂದ 5 ಬಾರಿ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ : ರಮೇಶ ಜಾರಕಿಹೊಳಿ
ಜನತೆಯ ಆಶೀರ್ವಾದದಿಂದ 5 ಬಾರಿ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ : ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 26 :
ಜನತೆಯ ಆಶೀರ್ವಾದದಿಂದ 5 ಬಾರಿ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದರು
ಮಂಗಳವಾರದಂದು ಸಂಜೆ ನಗರದ 19 ನೇ ವಾರ್ಡನಲ್ಲಿ ಮತಯಾಚನೆ ಮಾಡುತಾ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಬಿಜೆಪಿ ಪಕ್ಷವನ್ನು ಸೇರಿದ್ದು ,ಜನತೆ ಈ ಉಪ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ನೀಡಿ ನನಗೆ ಆಶೀರ್ವದಿಸಬೇಕೆಂದು ವಿನಂತಿಸಿದರು
ಜನತೆಯ ಸೇವೆಯೆ ನನ್ನ ಮೂಲ ಉದ್ದೇಶವಾಗಿದ್ದು, ವದಂತಿಗಳಿಗೆ ಕಿವಿಗೋಡದೆ ಧೈರ್ಯದಿಂದ ಬಿಜೆಪಿ ಪಕ್ಷದ ಚಿಹ್ನೆ ಕಮಲಕ್ಕೆ ಮತವನ್ನು ನೀಡುವಂತೆ ಕೊರಿದರು
ಈ ಸಂದರ್ಭದಲ್ಲಿ ಲಕ್ಷ್ಮಣ ಪಾತ್ರೋಟ,ಬಾಬು ಕಡೇವಾಡಿ,ಲಕ್ಷ್ಮಣ ಖಡಕಬಾಂವಿ , ಮುತ್ತೆಪ್ಪ ಪುಡಕಲ್ಲಕಟ್ಟಿ ,ಮಲ್ಲಿಕಾರ್ಜುನ ಬನ್ನಿಶೆಟ್ಟಿ, ರಾಯಪ್ಪ ಗುದಗನವರ ಸೇರಿದಂತೆ ಇತರರು ಇದ್ದರು