RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಧರ್ಮದ ದಾರಿಯಲ್ಲಿ ಸಾಗಿದಾಗ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ : ಮಾತೋಶ್ರೀ ಜಾನಮ್ಮ

ಗೋಕಾಕ:ಧರ್ಮದ ದಾರಿಯಲ್ಲಿ ಸಾಗಿದಾಗ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ : ಮಾತೋಶ್ರೀ ಜಾನಮ್ಮ 

ಧರ್ಮದ ದಾರಿಯಲ್ಲಿ ಸಾಗಿದಾಗ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ : ಮಾತೋಶ್ರೀ ಜಾನಮ್ಮ

ಗೋಕಾಕ ಅ 6: ಧರ್ಮಕ್ಕಾಗಿ ನಾವು ರಕ್ಷಿಸಿದರೇ, ಧರ್ಮ ನಮ್ಮನ್ನು ರಕ್ಷಿಸುತ್ತದೆ, ಅಧರ್ಮದ ದಾರಿಯನ್ನು ಬಿಟ್ಟು ಧರ್ಮದ ದಾರಿಯಲ್ಲಿ ಸಾಗಿದಾಗ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ದೇವರ ಹುಬ್ಬಳ್ಳಿಯ ಮಾತೋಶ್ರೀ ಜಾನಮ್ಮ ಅವರು ಹೇಳಿದರು.

ಭಾನುವಾರದಂದು ನಗರದ ಶ್ರೀ ಬಸವ ಮಂದಿರದಲ್ಲಿ ಇಲ್ಲಿಯ ಭಾವ ಸಂಗಮದ 155ನೇ ಮಾಸಿಕ ಕಾರ್ಯಕ್ರಮದಲ್ಲಿ ಧರ್ಮೋ ರಕ್ಷಿತಿ ರಕ್ಷಿತ: ಎಂಬ ವಿಷಯದ ಮೇಲೆ ಮಾತನಾಡಿದ ಅವರು, ಇಂದಿನ ಆಧುನಿಕತೆಯ ಹೆಸರಿನಲ್ಲಿ ನಾವು ಇಂದು ನಮ್ಮ ಧರ್ಮದ ಆಚಾರ ವಿಚಾರಗಳನ್ನು ಮರೆಯುತ್ತಿದ್ದೇವೆ. ಶರಣ ಸಂಸ್ಕøತಿಯ ಆಚರಣೆಗೆ ತರುವುದರೊಂದಿಗೆ ನಾವಿಂದು ಧರ್ಮವನ್ನು ರಕ್ಷಿಸಬೇಕಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಗೀತ ಶಿಕ್ಷಕ ಮಲ್ಲಿಕಾರ್ಜುನ ವಕ್ಕುಂದ ಅವರ ತಂಡ ಹಾಗೂ ಸುಧಾ ಹಿರೇಮಠ, ರಾಜೇಶ್ವರಿ ಪಾಟೀಲ, ಮಹಾನಂದಾ ಗುಣಕಿ, ಶಾಂತಕ್ಕ ಪಡಮದ, ಸುಶೀಲಕ್ಕ ಪೂಜೇರಿ ವೈಶಾಲಿ ಭರಭರಿ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ವೇದಿಕೆ ಮೇಲೆ ಶ್ರೀ ಬಸವ ಮಂದಿರ ಸತ್ಸಂಗ ಸಮಿತಿ ಅಧ್ಯಕ್ಷ ಬಿ.ಎಸ್.ಪಂಡಿತ, ಭಾವ ಸಂಗಮದ ಸಂಸ್ಥಾಪಕ ನರೇಂದ್ರ ಪುರಂದರೆ, ಕಾರ್ಯಾಧ್ಯಕ್ಷ ಈಶ್ವರಚಂದ್ರ ಬೆಟಗೇರಿ, ವಸಂತ ಕುಲಕರ್ಣಿ, ವಾಯ್.ಬಿ.ಪಾಟೀಲ ಇದ್ದರು.

ಪ್ರೋ, ಗಂಗಾಧರ ಮಳಗಿ ಸ್ವಾಗತಿಸಿದರು, ಜಯಾನಂದ ಮಾದರ ವಂದಿಸಿದರು.

Related posts: