RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಆರೋಗ್ಯ ಸಂಪತ್ತಕಿಂತ ಬೇರೆ ಸಂಪತ್ತು ಇಲ್ಲ : ಸಂತೋಷ ಕುಲಕರ್ಣಿ

ಗೋಕಾಕ:ಆರೋಗ್ಯ ಸಂಪತ್ತಕಿಂತ ಬೇರೆ ಸಂಪತ್ತು ಇಲ್ಲ : ಸಂತೋಷ ಕುಲಕರ್ಣಿ 

ಆರೋಗ್ಯ ಸಂಪತ್ತಕಿಂತ ಬೇರೆ ಸಂಪತ್ತು ಇಲ್ಲ : ಸಂತೋಷ ಕುಲಕರ್ಣಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 22 :

 

 

ರೈತರು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಆರೋಗ್ಯ ಸಂಪತ್ತಕಿಂತ ಬೇರೆ ಸಂಪತ್ತು ಇಲ್ಲವೆಂದು ಬೆಳಗಾವಿಯ ವಾಸನ್ ಐ ಕೇರ್‍ನ ಸಂತೋಷ ಕುಲಕರ್ಣಿ ಹೇಳಿದರು.
ಅವರು ಬುಧವಾರದಂದು ನಗರದ ಎಪಿಎಂಸಿಯಲ್ಲಿರುವ ಸೋನಾಲಿಕಾ ಟ್ರ್ಯಾಕ್ಟರ್ ಶೋ.ರೊಂ ನಲ್ಲಿ ವಾಸನ್ ಐಕೇರ್ ಬೆಳಗಾವಿ ಹಾಗೂ ಸೋನಾಲಿಕಾ ಟ್ರ್ಯಾಕ್ಟರ್ ಶೋರೋಂ ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ರೈತ ಬಾಂಧವರಿಗೆ ಉಚಿತ ನೇತ್ರ ತಪಾಸಣಾ ಶಿಬಿರವನ್ನುದ್ದೇಶಿಸಿ ಮಾತನಾಡಿದರು.
ರೈತರು ಜಮೀನಗಳಲ್ಲಿ ಹಗಲು ರಾತ್ರಿ,ಮಳೆ ಬಿಸಿಲು ಎನ್ನದೇ ದುಡಿಮೆಯಲ್ಲಿ ತೊಡಗಿರುತ್ತಾರೆ. ಆದ್ದರಿಂದ ಅವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ರೈತರ ಆರೋಗ್ಯ ಚಿಕಿತ್ಸೆ ಬಗ್ಗೆ ಹಲವಾರು ಸೌಲಭ್ಯಗಳಿದ್ದು ಅವುಗಳನ್ನು ಕುಟುಂಬ ಸಮೇತ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಬೆಳಗಾವಿ ಐಕೇರ್‍ನ ಪ್ರಸಾದ, ಶೋರೋಂ ನ ಶ್ರವಣ ಮನ್ನಿಕೇರಿ, ಲಕ್ಷ್ಮಣ ಮನ್ನಿಕಟ್ಟಿ ಹಾಗೂ ರೈತ ಬಾಂಧವರು ಇದ್ದರು.
ಈ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ರೈತರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು.

Related posts: