ಘಟಪ್ರಭಾ:ನರ್ಸ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಸೆನಿಟೈಜರ ವಿತರಣೆ
ನರ್ಸ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಸೆನಿಟೈಜರ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಎ 13 :
ಕೋವಿಡ-19 ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಸಮರೋಪಾಧಿಯಲ್ಲಿ ಕೆಲಸ ಮಾಡುತ್ತಿರುವ ನರ್ಸಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಮುಖಂಡರಾದ ಸುರೇಶ ಪೂಜಾರಿ ಅವರು ತಮ್ಮ ಸ್ವಂತ ಖರ್ಚಿನ ಸೆನಿಟೈಜರಗಳನ್ನು ಸೋಮವಾರ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ ಪೂಜಾರಿ ಅವರು ತಮ್ಮ ಪ್ರಾಣದ ಹಂಗವನ್ನು ತೊರೆದು ನರ್ಸಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಗಲು ರಾತ್ರಿಯನ್ನದೇ ನಮ್ಮ ಆರೋಗ್ಯ ಕಾಪಾಡುವಗೋಸ್ಕರ ದುಡಿಯುತ್ತಿದ್ದಾರೆ. ನಾವೆಲ್ಲರು ಅವರಿಗೆ ಸಹಕಾರ ನೀಡಬೇಕು ಹಾಗೂ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಧರ್ಮವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಜಗದೀಶ ಚೂರಿ, ಪ.ಪಂ ಸದಸ್ಯರಾದ ಮಲ್ಲು ಕೋಳಿ, ಸಲೀಮ ಕಬ್ಬೂರ, ಪ್ರವೀಣ ಮಟಗಾರ, ಇಮ್ರಾನ ಬಟಕುರ್ಕಿ, ಹಿರಿಯ ಆರೋಗ್ಯ ಸಹಾಯಕಿ ಎಸ್.ಸಿ.ಕಲಗೋಡಿ, ಬಜರಂಗದಳ ಕಾರ್ಯಕರ್ತರಾದ ಆಶೀಶ ಕಾಳೆ, ಅಂಗನವಾಡಿ ಕಾರ್ಯಕತೆಯರಾದ ಮಹಾನಂದಾ ಪುರಾಣಿಕ, ಶೋಬಾ ಹಿರೇಮಠ, ರಜಪೂರ. ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು.