RNI NO. KARKAN/2006/27779|Sunday, September 8, 2024
You are here: Home » breaking news » ಅಥಣಿ:ಕಳ್ಳಭಟ್ಟಿ ಸಾಗಾಟ ದಾಳಿ ಒರ್ವನ ಬಂದನ

ಅಥಣಿ:ಕಳ್ಳಭಟ್ಟಿ ಸಾಗಾಟ ದಾಳಿ ಒರ್ವನ ಬಂದನ 

ಕಳ್ಳಭಟ್ಟಿ ಸಾಗಾಟ ದಾಳಿ ಒರ್ವನ ಬಂದನ

 

ನಮ್ಮ ಬೆಳಗಾವಿ ಇ – ವಾರ್ತೆ , ಅಥಣಿ ಎ 17 :

 

 

  1. ಲಾಕ್ ಡೌನ ನಿಂದಾಗಿ ಸಾರಾಯಿ ಸಿಗದ ಕಾರಣ ಜನ ಅಕ್ರಮ ಕಳ್ಳಭಟ್ಟಿ ಸರಾಯಿ ತಯಾರಿಸುತಿದ್ದು ಅಂತವರನ್ನು  ಬಂದಿಸುವಲ್ಲಿ ಅಥಣಿ ಅಬಕಾರಿ ಇಲಾಖೆಯ ಪೊಲೀಸರು ಯಶಸ್ವಿಯಾಗಿದ್ದಾರೆ. 
  2.  ಮುರುಗೇಶ ಶಿವಲಿಂಗ ಮುತ್ತುರ  ಎಂಬ ಬಂದಿತ ವ್ಯಕ್ತಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದವನಾಗಿದ್ದು ಯಕ್ಕಂಚಿ ಗ್ರಾಮದ ಚಮಕೇರಿ ಕ್ರಾಸನಲ್ಲಿ ಅಕ್ರಮವಾಗಿ ಕಳ್ಳ ಬಟ್ಟಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿರುವ ಅಧಿಕಾರಿಗಳು ಬಂದಿತನಿಂದ  ಅಂದಾಜು ₹, 16800, /-   ಮೌಲ್ಯದ 5 ಲೀಟರ್ ಕಳ್ಳಬಟ್ಟಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಥಣಿ ವಲಯದ ಅಬಕಾರಿ ಜಂಟಿ ಆಯುಕ್ತರು ಬೆಳಗಾವಿ ಹಾಗೂ ಅಬಕಾರಿ ಉಪ ಅಧೀಕ್ಷಕರು ಚಿಕ್ಕೋಡಿ ಇವರ ಮಾರ್ಗದರ್ಶನದಲ್ಲಿ  ಅಥಣಿ ಅಬಕಾರಿ ನೀರಿಕ್ಷಕರಾದ ಮಹೇಶ ದೂಳಪ್ಪನವರ, ಉಪ ನೀರಿಕ್ಷಕ ಸಂಜಯಕುಮಾರ  ಅಸ್ಕಿ ಮತ್ತು  ಬಸವರಾಜ ಮುಡಸಿ, ಸಿಬ್ಬಂದಿಗಳಾದ ಮೋಹನ ಕಾಂಬಳೆ,ಬಾಹುಬಲಿ ಸವದಿ,ಎಸ್ ಎಸ್ ತಳವಾರ,    ಡಿ ಎ ಮುಲ್ಲಾ ದಾಳಿಯಲ್ಲಿ ಬಾಗಿಯಾಗಿದ್ದರು.  

Related posts: