ಗೋಕಾಕ:ಪ್ರೋ ಕೆ.ಎಸ್.ನಿಸಾರ ಅಹಮದ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟವಾಗಿದೆ
ಪ್ರೋ ಕೆ.ಎಸ್.ನಿಸಾರ ಅಹಮದ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟವಾಗಿದೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೆ 6 :
ನಿತ್ಯೋತ್ಸವ ಕವಿ ಎಂದ ಖ್ಯಾತರಾದ ಪ್ರೋ ಕೆ.ಎಸ್.ನಿಸಾರಅಹಮದ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ಮಹಾಂತೇಶ ತಾವಂಶಿ ಹೇಳಿದರು
ಮಂಗಳಳವಾರದಂದು ನಗರದ ರೋಟರಿ ರಕ್ತ ಭಂಡಾರ ಕೇಂದ್ರದ ಆವರಣದಲ್ಲಿ ಕಸಾಪ ತಾಲೂಕು ಘಟಕದಿಂದ ಹಮ್ಮಿಕೊಂಡ ಇತ್ತೀಚೆಗೆ ನಿಧನರಾದ ನಿಸಾರ ಅಹಮದ ಅವರ ಶೃದ್ದಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ ಶಿಸ್ತು , ಸರಳ ಸಜ್ಜನಿಕೆಯ ಕವಿಯಾಗಿ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದರು
ಈ ಸಂದರ್ಭದಲ್ಲಿ ಸಿದ್ದಲಿಂಗ ದಳವಾಯಿ , ಚಂದ್ರಶೇಖರ ಅಕ್ಕಿ , ಡಾ.ಸಿ.ಕೆ ನಾವಲಗಿ , ಈಶ್ವರಚಂದ್ರ ಬೆಟಗೇರಿ , ಜಿ.ಕೆ ಕಾಡೆಶಕುಮಾರ , ಜಯಾನಂದ ಮಾದರ , ಲಕ್ಷ್ಮಣ ಚೌರಿ , ರಾಮಚಂದ್ರ ಕಾಕಡೆ , ರಜನಿ ಜಿರಗ್ಯಾಳ , ಸಂಗೀತಾ ಬನ್ನೂರ , ವೈಶಾಲಿ ಭರಭರಿ , ಜಯಾ ಚುನಮುರಿ, ಶೈಲಾ ಕೊಕ್ಕರಿ ಇದ್ದರು