RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಸಿಸಿ ರಸ್ತೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚಾಲನೆ

ಗೋಕಾಕ:ಸಿಸಿ ರಸ್ತೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚಾಲನೆ 

ಸಿಸಿ ರಸ್ತೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚಾಲನೆ

 
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಜೂ 7:

 
ಭೂಸೇನಾ ನಿಗಮದಿಂದ ತಾಲೂಕಿನ ಮಕ್ಕಳಗೇರಿ ಮತ್ತು ಪುಡಕಲಕಟ್ಟಿ ಗ್ರಾಮಗಳಿಗೆ ಎಸ್ ಸಿ , ಎಸ್ ಟಿ ಅನುದಾನದಡಿ ಮಂಜೂರಾದ 15 ಲಕ್ಷ ಮತ್ತು 35 ಲಕ್ಷ ಮೊತ್ತದ ಸಿ‌ಸಿ ರಸ್ತೆ ಹಾಗೂ ಭರ್ಮ ದೇವರ ದೇವಸ್ಥಾನ ಅಬಿವೃದ್ದಿ ಕಾಮಗಾರಿಗಳಿಗೆ ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ರವಿವಾರದಂದು ಚಾಲನೆ ನೀಡಿದರು

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಸದಾ ಕಾಲ ಅಭಿವೃದ್ಧಿಗೆ ಪೂರಕವಾದಂತಹ ಕಾರ್ಯಗಳನ್ನು ಮಾಡುತಾ ಬಂದಿದ್ದು , ಜಲಸಂಪನ್ಮೂಲ ಹಾಗೂ ವಿವಿಧ ಇಲಾಖೆಗಳ ಅಡಿಯಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಅಬಿವೃದ್ದಿ ಕಾಮಗಾರಿಗಳನ್ನು ಕೈಗೊಂಡು ಗೋಕಾಕ ತಾಲೂಕನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರಮಾಣಿಕವಾಗಿ ಪ್ರಯತ್ನಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು

ಜಿ.ಪಂ ಸದ್ಯಸರುಗಳಾದ ಟಿ.ಆರ್.ಕಾಗಲ್, ಮಡೆಪ್ಪ ತೋಳಿನವರ , ಗ್ರಾ.ಪಂ ಅಧ್ಯಕ್ಷ ವಿಠಲ ಕರಿಗಾರ , ತಾ.ಪಂ ಸದಸ್ಯ ಭರಮಣ್ಣ ಮುತ್ತೆನ್ನವರ , ಸಿವರಾಯ ದಂಡಿನ , ಭೀಮಶಿ ಗೋರಬಾಳ, ರಾಮಚಂದ್ರ ದುರದುಂಡಿ, ಪುಂಡಲಿಕ ಕಾಗಲ , ಅಶೋಕ ಕಾಗಲ , ರಮೇಶ ಬಚ್ಚನವರ , ಲಕ್ಕಪ್ಪ ದುರದುಂಡಿ , ಪ್ರಕಾಶ ಕಿತ್ತೂರ , ವಿಠಲ ಬಚ್ಚನವರ , ಶಿವಪ್ಪ ಮೆಳವಂಕಿ , ಸೈಯದಹುಸೇನ ಹುಲಿಕಟ್ಟ, ಮುದಕಪ್ಪ ಮೆಳವಂಕಿ , ಅಡಿವೆಪ್ಪ ತೋಳಿನ, ತುಕಾರಾಮ ಬಚ್ಚನವರ , ನಿಂಗಪ್ಪ ತೋಳಿವರ , ಶಿವಪುತ್ರ ದುರದುಂಡಿ ಸೇರಿದಂತೆ ಅನೇಕರು ಇದ್ದರು.

Related posts: