ಬೆಳಗಾವಿ:ಮಹಿಳಾ ಕಾಂಗ್ರೇಸ ಅಧ್ಯಕ್ಷೆ ಲಕ್ಮೀ ಹೆಬ್ಬಾಳಕರ ವಿರುದ್ದ ಹರಿಹಾಯ್ದ ಎಐಸಿಸಿ ಕಾರ್ಯದರ್ಶಿ ಸತೀಶ
ಮಹಿಳಾ ಕಾಂಗ್ರೇಸ ಅಧ್ಯಕ್ಷೆ ಲಕ್ಮೀ ಹೆಬ್ಬಾಳಕರ ವಿರುದ್ದ ಹರಿಹಾಯ್ದ ಎಐಸಿಸಿ ಕಾರ್ಯದರ್ಶಿ ಸತೀಶ
ಬೆಳಗಾವಿ ಅ 27: ಸನ್ಮಾನ ಕಾರ್ಯಕ್ರಮ ಒಂದರಲ್ಲಿ ಮಾಜಿ ಸಚಿವ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಅವರು ಮಹಿಳಾ ಕಾಂಗ್ರೇಸ ಅಧ್ಯಕ್ಷೆ ಶ್ರೀಮತಿ ಲಕ್ಮೀ ಹೆಬ್ಬಾಳಕರ ವಿರುದ್ಧ ವಾಗ್ದಾಳಿ ನಡಿಸಿದ್ದಾರೆ
ಇಂದು ಸತೀಶ್ ಜಾರಿಕಿಹೊಳಿ ಅವರ ಅಭಿಮಾನಿಗಳು ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರದಲ್ಲಿ ಮಾತನಾಡಿದ ಸತೀಶ್ ಜಾರಿಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಹರಿಹಾಯ್ದರು. ಇದರಿಂದ ಬೆಳಗಾವಿ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು.
ದೆಹಲಿಯಲ್ಲಿ ಒಬ್ಬ ನಾಯಕ, ಬೆಂಗಳೂರಲ್ಲಿ ಒಬ್ಬ ನಾಯಕ, ಬೆಳಗಾವಿಯಲ್ಲಿ ಒಬ್ಬ ನಾಯಕನನ್ನು ಇಟ್ಟುಕೊಂಡು ರಾಜಕೀಯ ಮಾಡಿದಂತೆ ಈ ಬಾರಿ ರಾಜಕೀಯ ಮಾಡಲು ಆಗಲ್ಲಾ. ನಿವು ನೂರು ರೂಪಾಯಿಯ 20 ಸಾವಿರ ಸೀರೆಯನ್ನು ಹಂಚಿದರೆ ಜನರು ಮತ ಹಾಕಲ್ಲಾ. ನನ್ನಲ್ಲಿ ಎಲ್ಲವೂ ಇದೆ. ನೀವು ನೂರು ರೂಪಾಯಿ ಸೀರೆ ಹಂಚಿದರೆ ನಾನು ಎರಡು ನೂರು ರೂಪಾಯಿ ಸೀರೆ ಹಂಚುತ್ತೇನೆ. ನೋಡತಾ ಇರಿ ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸತೀಶ್ ಜಾರಿಕಿಹೊಳಿ ಟಾಂಗ್ ಕೊಟ್ಟರು.
ನನ್ನ ಕೆಲಸ ನೋಡಿ ಕೇಂದ್ರದಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಸ್ಥಾನ ಕೊಟ್ಟಿದ್ದಾರೆ. ಅಲ್ಲಿಯೂ ಕೂಡಾ ಉತ್ತಮ ರೀತಿಯಾಗಿ ಕೆಲಸ ಮಾಡುತ್ತೇನೆ. ಬೆಳಗಾವಿ ಹೆಸರು ತರುತ್ತೇನೆ. ಅಧಿಕಾರ ಶಾಶ್ವತವಾದುದಲ್ಲ. ಜನರ ವಿಶ್ವಾಸ ಮುಖ್ಯ. ಕಳೆದ ಇಪ್ಪತ್ತು ವರ್ಷಗಳಿಂದ ಡಾ. ಅಂಬೇಡ್ಕರ್ ವಿಚಾರ ತತ್ವ-ಸಿದ್ಧಾಂತವನ್ನ ಹೇಳತ್ತಾ ಬಂದಿದ್ದೇನೆ. 800 ವರುಷದ ನಂತರ ಲಿಂಗಾಯತರು ಕಾಂಗ್ರಸ್ ಕಡೆ ಬಂದಿದ್ದಾರೆ ಎಂದರು.
ಕಳೆದ 20 ವರ್ಷಗಳಿಂದ ಒಂದು ಲಕ್ಷ ರೂಪಾಯಿ ಅನಾಥಾಶ್ರಮಕ್ಕೆ ನೀಡುತ್ತಿದ್ದೇನೆ. ರಾಜಕೀಯ ಲಾಭಕ್ಕಾಗಿ ಈಗಾಲಲೇ ಸೀರೆ ಹಂಚಲು ಪ್ರವೃತ್ತಿ ಶುರುವಾಗಿದೆ . ಆದ್ರೆ ನಮ್ಮ ಹೂಡಿಕೆ ಸಮಾಜದ ಮೇಲೆ ಇದೆ. ನಾವು ಇದುವರೆಗೆ ಅನಾಥರಿಗೆ ಹಂಚಿದ 20 ಲಕ್ಷ ರೂಪಾಯಿ ನೋಡಿದ್ರೆ 20 ಸಾವಿರ ಸೀರೆ ಹಂಚಿದಂತಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಸಿದರು