RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಒಂದು ವರ್ಷ ಅವದಿ ಪೂರೈಕೆ : ಸಸಿ ನೆಟ್ಟು ಸಂಭ್ರಮ

ಘಟಪ್ರಭಾ:ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಒಂದು ವರ್ಷ ಅವದಿ ಪೂರೈಕೆ : ಸಸಿ ನೆಟ್ಟು ಸಂಭ್ರಮ 

ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಒಂದು ವರ್ಷ ಅವದಿ ಪೂರೈಕೆ : ಸಸಿ ನೆಟ್ಟು ಸಂಭ್ರಮ

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಜು 28 :

 

ಸ್ಥಳೀಯ ಮಲ್ಲಾಪೂರ ಪಿಜಿ ಪಟ್ಟಣದ ಜನತಾ ಪ್ಲಾಟದಲ್ಲಿರುವ ಸರಕಾರಿ ಕನ್ನಡ ಹಾಗೂ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಿಡ ಹಚ್ಚುವ ಕಾರ್ಯಕ್ರಮವನ್ನು ಪಟ್ಟಣದ ಹಿರಿಯರಾದ ಡಿ.ಎಮ್.ದಳವಾಯಿ ಹಾಗೂ ಈಶ್ವರ ಮಟಗಾರ ಸಸಿ ನೇಡುವದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಒಂದು ವರ್ಷ ಅವದಿ ಪೂರೈಸಿದ್ದಕ್ಕಾಗಿ ಜಲಸಂಪನ್ಮೂಲ ಸಚಿವರು ಹಾಗೂ ಬೆಳಗಾವಿ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿಯವರ ನಿರ್ದೇಶನದಂತೆ ಶಾಲೆಗಳಲ್ಲಿ ಸಸಿ ನೇಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯರಾದ ಸುರೇಶ ಪಾಟೀಲ, ಜಿ.ಎಸ.ರಜಪೂತ, ಕಲ್ಲಪ್ಪ ಕೊಂಕಣಿ, ಕಿರಣ ವಾಲಿ, ಹರೀಶ ಕಾಳೆ, ಪ ಪಂ. ಸದಸ್ಯರಾದ ಸಲೀಮ ಕಬ್ಬೂರ, ಮಲ್ಲು ಕೋಳಿ, ಪ್ರವೀಣ ಮಟಗಾರ, ಮಾರುತಿ ಹುಕ್ಕೇರಿ, ನಾಗರಾಜ ಚಚಡಿ, ಗ್ರಾಮಸ್ಥರಾದ ಸುರೇಶ ಪೂಜಾರಿ, ಮಡಿವಾಳಪ್ಪ ಮುಚಳಂಬಿ, ಅಲ್ತಾಪ ಉಸ್ತಾದ, ಕಾಡಪ್ಪ ಕರೋಶಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಕುಮಾರ ಹುಕ್ಕೇರಿ, ಕಲ್ಲಪ್ಪ ಕಾಡದವರ, ಭದ್ರು ಗಂಡವ್ವಗೋಳ, ನಾಗರಾಜ ಝಂಬ್ರಿ, ದಯಾನಂದ ಗುಡಾಜ, ಪ್ರತಾಪ ಬೇವಿನಗಡದ, ರಾಜು ದೊಡಮನಿ, ಶಿಕ್ಷಕರಾದ ಶ್ರೀಕಾಂತ ಹಂಚಿನಾಳ, ಡಿ.ಕೆ ಜಮಾದಾರ, ಕಲಾರಕೊಪ್ಪ, ಸೇರಿದಂತೆ ಶಿಕ್ಷಕ ವರ್ಗದವರು ಇದ್ದರು.

Related posts: