ಗೋಕಾಕ:ಉಪ್ಪಾರಹಟ್ಟಿ ಗ್ರಾಮದಲ್ಲಿ ಶ್ರೀರಾಮಚಂದ್ರನ ಭಾವಚಿತ್ರಕ್ಕೆ ವಿಶೇಷ ಪೂಜೆ
ಉಪ್ಪಾರಹಟ್ಟಿ ಗ್ರಾಮದಲ್ಲಿ ಶ್ರೀರಾಮಚಂದ್ರನ ಭಾವಚಿತ್ರಕ್ಕೆ ವಿಶೇಷ ಪೂಜೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 5 :
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಜರುಗಿದ ಹಿನ್ನಲೆ ತಾಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ಶ್ರೀರಾಮಚಂದ್ರನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಉಪ್ಪಾರಟ್ಟಿ ಗ್ರಾಮದ ಶ್ರೀ ಸಿದ್ಧಾರೂಡ ಮಠದ ಪರಮ ಪೂಜ್ಯ ಶ್ರೀ ನಾಗೇಶ್ವರ ಸ್ವಾಮಿಜಿ, ಯುವ ಧುರೀಣ ಹನಮಂತ ದುರ್ಗನ್ನವರ, ಹನಮಂತ ಖಿಚಡಿ, ಸಿದ್ದಪ್ಪ ಬೂದಿಗೊಪ್ಪ, ಮಹಾದೇವ ಭಂಡಿ, ರಮೇಶ ತಿಗಡಿ, ಸಂತೋಷ ಚಿಗದನ್ನವರ, ಕರೆಪ್ಪ ಕೊಳವಿ, ಹನಮಂತ ಮೂಡಲಗಿ, ಗುರುಲಿಂಗ ಭಾಗೋಜಿ, ರಂಗಪ್ಪ ಖಿಚಡಿ, ಹನಮಂತ ಕಡಕೋಳ, ಚನ್ನಮಲ್ಲ ತಿಗಡಿ, ರಾಮಪ್ಪ ಸಿರಸಂಗಿ, ಬಸು ನೇಸರಗಿ, ನಾರಾಯಣ ಮೂಡಲಗಿ, ಸಿದ್ದಪ್ಪ ಕೊಳವಿ, ಭೀಮಶಿ ಕೊಳವಿ, ಸಿದ್ದಪ್ಪ ಖಿಚಡಿ, ದಶರಥ ಖಿಚಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.