ಗೋಕಾಕ:ಜಾತ್ಯತೀತ ನಾಯಕರಾಗಿದ್ದ ಎಸ ಎ ಕೋತವಾಲ ನಿಧನ ತುಂಬಲಾರದ ನಷ್ಷ ಉಂಟುಮಾಡಿದೆ : ಸಚಿವ ರಮೇಶ ಜಾರಕಿಹೊಳಿ
ಜಾತ್ಯತೀತ ನಾಯಕರಾಗಿದ್ದ ಎಸ ಎ ಕೋತವಾಲ ನಿಧನ ತುಂಬಲಾರದ ನಷ್ಷ ಉಂಟುಮಾಡಿದೆ : ಸಚಿವ ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 9 :
ಜಾತ್ಯತೀತ ನಾಯಕರಾಗಿದ್ದ ಎಸ ಎ ಕೋತವಾಲ ನಿಧನ ತುಂಬಲಾರದ ನಷ್ಷ ಉಂಟುಮಾಡಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು
ರವಿವಾರದಂದು ನಗರದ ಅವರ ಕಾರ್ಯಾಲಯದಲ್ಲಿ ಹಿರಿಯ ನರಗಸಭೆ ಸದಸ್ಯ ದಿವಂಗತ ಎಸ.ಎ ಕೋತವಾಲ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು
ರಾಜಕೀಯವಾಗಿ, ಸಾಮಾಜಿಕವಾಗಿ ಎಲ್ಲರೊಂದಿಗೆ ಒಳೆಯ ಒಡನಾಟ ಹೊಂದಿದ ಕೋತವಾಲ ಅವರು ರಾಜಕೀಯವಾಗಿ ಪ್ರತಿ ಕ್ಷಣದಲ್ಲಿ ನನ್ನೊಂದಿಗೆ ಇದ್ದು , ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು ಎಂದು ನೆನೆದ ಸಚಿವರು ಅವರ ಕುಟುಂಬ ವರ್ಗಕ್ಕೆ ದುಃಖ ಮರೆಯುವ ಶಕ್ತಿ ನೀಡಲೆಂದು ಪ್ರಾರ್ಥಿಸಿದರು
ಇದ್ದಕ್ಕೂ ಮೊದಲು ದಿವಂಗತ ಕೋತವಾಲ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ್ , ಜಿಪಂ ಸದಸ್ಯರುಗಳಾದ ಟಿ.ಆರ್.ಕಾಗಲ , ಮಡೆಪ್ಪ ತೊಳಿನವರ , ನಗರಸಭೆ ಸದಸ್ಯ ಜಯಾನಂದ ಹುಣಶ್ಯಾಳ, ಶ್ರೀಶೈಲ ಯಕ್ಕುಂಡಿ, ನಗರ ಬಿಜೆಪಿ ಅಧ್ಯಕ್ಷ ಭೀಮಶಿ ಭರಮನ್ನರ, ಮುಖಂಡರುಗಳಾದ ಆನಂದ ಗೋಡಟಕ್ಕಿ, , ಸುರೇಶ ಸನದಿ, ಮಹಾವೀರ ಡೊಂಗರೆ, ರಾಜು ಮಾಳಿ, ಸುರೇಶ ಈಳಿಗೇರ , ಅಶೋಕ ಗೋಣಿ , ಸಾದಿಕ ಹಲ್ಯಾಳ , ರಾಜು ಹೆಗ್ಗನ್ನವರ , ಮುಸ್ತಾಕ ಖಂಡಾಯತ, ಅಬ್ಬಾಸ ದೇಸಾಯಿ ಸೇರಿದಂತೆ ಇತರರು ಇದ್ದರು.