ಗೋಕಾಕ:ಕರ್ನಾಟಕ ಯುವ ಸೇನೆಯಿಂದ ಕೇಂದ್ರ ರಾಜ್ಯ ರೇಲ್ವೆ ಮಂತ್ರಿಗಳಾದ ಸುರೇಶ ಅಂಗಡಿಯವರಿಗೆ ಶ್ರದ್ಧಾಂಜಲಿ
ಕರ್ನಾಟಕ ಯುವ ಸೇನೆಯಿಂದ ಕೇಂದ್ರ ರಾಜ್ಯ ರೇಲ್ವೆ ಮಂತ್ರಿಗಳಾದ ಸುರೇಶ ಅಂಗಡಿಯವರಿಗೆ ಶ್ರದ್ಧಾಂಜಲಿ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಸೇ 24 :
ಕರ್ನಾಟಕ ಯುವ ಸೇನೆಯಿಂದ ಕೇಂದ್ರ ರಾಜ್ಯ ರೇಲ್ವೆ ಮಂತ್ರಿಗಳಾದ ಸುರೇಶ ಅಂಗಡಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕೆಂಪಣ್ಣ ಚೌಕಾಶಿ ಮಾತನಾಡಿ, ಸುರೇಶ ಅಂಗಡಿಯವರು ಒಬ್ಬ ವ್ಯಕ್ತಿ ಅಲ್ಲ ಶಕ್ತಿಯಾಗಿದ್ದರು. ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ ಅವರ ಅಗಲಿಕೆಯಿಂದ ನಮ್ಮ ಜಿಲ್ಲೆಗೆ ತುಂಬಲಾರದ ಹಾನಿಯಾಗಿದೆ ಭಗವಂತನು ಮೃತರ ಆತ್ಮಕ್ಕೆ ಚಿರಶಾಂತ ನೀಡಲೆಂದರು.
ಈ ಸಂದರ್ಭದಲ್ಲಿ ಹಿರಿಯರಾದ ಎಸ್.ವಾಯ್.ಬೆನವಾಡಿ. ಜಿಲ್ಲಾ ಅಧ್ಯಕ್ಷ ವೀರಣ್ಣ ಸಂಗಮನವರ, ಭರಮಣಾ ಗಾಡಿವಡ್ಡರ, ಅಜ್ಜಪ್ಪಾ ಕುಡ್ಡಗೋಳ, ಸಲಿಮ ಮುಲ್ಲಾ, ಫರಿದಾ ಮುಲ್ಲಾ, ಶಿವರಾಜ್ ಚಿಗಡೊಳ್ಳಿ, ಲಗಮಣಾ ನಾಯಿಕ, ನಿತೀನ ದೇಶಪಾಂಡೆ, ಶಂಕರ ಮುಗ್ಗನವರ, ಶಶಿ ಚೌಕಶಿ, ಅರ್ಜುನ ಗಂಡವ್ವಗೋಳ, ರಾಘವೇಂದ್ರ ಚಿಂಚಲಿ, ಗೌತಮ್ ಅಗ್ಗರವಾಲ, ಶ್ರೀಧರ ಹಳ್ಳೂರ, ಶಂಕರಯ್ಯಾ ಸ್ವಾಮೀಜಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.