ಗೋಕಾಕ:ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 21
ಫೆಬ್ರವರಿ 27 ರಂದು ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಶಾಲಾ ಆವರಣದಲ್ಲಿ ಜರಗಲಿರುವ ಗೋಕಾಕ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ರವಿವಾರದಂದು ಸಾಯಂಕಾಲ ನಗರದ ರೋಟರಿ ರಕ್ತ ಭಂಡಾರ ಸಭಾ ಭವನದಲ್ಲಿ ಬಿಡುಗಡೆಗೊಳಿಸಲಾಯಿತು
ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಮಹಾಂತೇಶ ತಾಂವಶಿ, ಸಾಹಿತಿಗಳಾದ ಪ್ರೊ. ಚಂದ್ರಶೇಖರ ಅಕ್ಕಿ, ಮಹಾಲಿಂಗ ಮಂಗಿ, ಸಿದ್ಧಲಿಂಗಪ್ಪ ದಳವಾಯಿ, ಪ್ರಾ. ಗಂಗಾಧರ ಮಳಗಿ, ವಸಂತರಾವ ಕುಲಕರ್ಣಿ, ಬಸವರಾಜ ಮುರಗೋಡ, ಜಯಾನಂದ ಮಾದರ, ಬಸವರಾಜ ಖಾನಪ್ಪನವರ, ಶಕುಂತಲಾ ದಂಡಗಿ, ಪುಷ್ಪಾ ಮುರಗೋಡ ಇದ್ದರು .