ಬೆಂಗಳೂರು:ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಜೈಲಿಗೆ ಹಾಕುವವರೆಗೆ ಬಿಡುವುದಿಲ್ಲ : ಮಾಜಿ ಸಚಿವ ರಮೇಶ
ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಜೈಲಿಗೆ ಹಾಕುವವರೆಗೆ ಬಿಡುವುದಿಲ್ಲ : ಮಾಜಿ ಸಚಿವ ರಮೇಶ
ನಮ್ಮ ಬೆಳಗಾವಿ ಇ – ವಾರ್ತೆ, ಬೆಂಗಳೂರು ಮಾ 9 :
ಸಿಡಿ ಬಿಡುಗಡೆಯ 26 ಘಂಟೆಗೆಗಳ ಮೊದಲೇ ನನ್ನಗೆ ನನಗೆ ಆಪ್ತರಿರುವವರು ಪೋನ್ ಮಾಡಿ ನಿಮ್ಮ ವಿರುದ್ಧ ಸಿಡಿ ಬಿಡುಗಡೆಯಾಗುತ್ತಿದ್ದೆ, ಕಾನೂನು ಹೋರಾಟಕ್ಕೆ ಅನಿಯಾಗಿ ಎಂದು ಹೇಳಿದ್ದರು ಆದರೆ ನಾನು ತಪ್ಪೇ ಮಾಡಿಲ್ಲ ಎಂದ ಮೇಲೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಧೈರ್ಯದಿಂದ ಇದ್ದೆ, ನನ್ನ ವಿರುದ್ಧ ಷಡ್ಯಂತ್ರ ಮಾಡಿದ 2+3+4 ಅವರನ್ನು ಜೈಲಿಗೆ ಹಾಕುವವರೆಗೆ ಬಿಡುವುದಿಲ್ಲ ಎಂದು ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು
ಮಂಗಳವಾರದಂದು ಬೆಂಗಳೂರಿನ ಸದಾಶಿವ ನಗರದ ಅವರ ಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಷಡ್ಯಂತ್ರ ಮಾಡಲು ಯುವತಿಗೆ 5 ಕೋಟಿ ಮತ್ತು ವಿದೇಶದಲ್ಲಿ ಎರೆಡು ಪ್ಲಾಟ್ ಗಳನ್ನು ನೀಡಲಾಗಿದೆ. ಇದೊಂದು ವ್ಯವಸ್ಥಿತ ಕಾರ್ಯವಾಗಿದ್ದು, ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆ ಅಕ್ಕ ಪಕ್ಕದಲ್ಲಿ 4 ಅಂತಸ್ತಿನಲ್ಲಿ , ಓರಿಯೋ ಅಕ್ಕ ಪಕ್ಕದಲ್ಲಿ 5 ಅಂತಸ್ತಿನಲ್ಲಿ ಈ ಷಡ್ಯಂತ್ರ ರಚಿಸಲಾಗಿದೆ ಎಂದ ಅವರು ನನ್ನ ಜೊತೆ ನಿಂತ ಧರ್ಮ ಪತ್ನಿ , ಮಕ್ಕಳು, ಸಹೋದರರು, ರಾಜಕೀಯ ನಾಯಕರಿಗೆ, ವಿರೋಧ ಪಕ್ಷದ ನಾಯಕರಿಗೆ , ಸ್ನೇಹಿತ , ಹಿತೈಷಿ, ಸಂಬಂಧಿಕರು, ಮತಕ್ಷೇತ್ರದ ಜನತೆ ಬಾವುಕರಾಗಿ ಧನ್ಯವಾದಗಳು ಹೇಳಿದರು.
ನನ್ನ ಹಾಗೂ ನನ್ನ ಕುಟುಂಬದ ಬೆಳವಣಿಗೆ ಸಹಿಸಲಾಗದೆ ನನ್ನ ಜನಪ್ರಿಯತೆ ಕೂಗ್ಗಿಸಲು ಮಾಡಿದ ಕಾರ್ಯ ಇದ್ದಾಗಿದ್ದು, ಈ ಷಡ್ಯಂತ್ರದ ಬಗ್ಗೆ ನಾಲ್ಕು ತಿಂಗಳ ಮೊದಲೇ ನನಗೆ ಮಾಹಿತಿ ಇತ್ತು ಆದರೆ ನಾನು ತಪ್ಪು ಮಾಡದ ಕಾರಣ ಧೈರ್ಯದಿಂದ ಇದ್ದೆ. ಈ ಸಿಡಿ 100% ನಕಲಿ ಇದರಲ್ಲಿ ಸತ್ಯಾಂಶ ವಿಲ್ಲ ಎಂದು ರಮೇಶ ಜಾರಕಿಹೊಳಿ ಹೇಳಿದರು.
ರಾಜಕೀಯ ಬರುತ್ತೆ ಹೊಗುತ್ತೆ ಆದರೆ ಮನೆತನದ ಮರ್ಯಾದೆ ಮುಖ್ಯ ಅದನ್ನು ಮರಳಿ ಪಡೆಯಬೇಕು. ರಾಜಕಾರಣದಲ್ಲಿ ನಾನು ಇರುತ್ತೆನೊ ಬಿಡುತ್ತೆನೊ ಗೊತ್ತಿಲ್ಲ ಆದರೆ ಈ ಷಡ್ಯಂತ್ರ ದಲ್ಲಿ ಭಾಗಿಯಾಗಿರುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ರಮೇಶ ಜಾರಕಿಹೊಳಿ ಅವರು ಹೇಳಿದರು