ಗೋಕಾಕ:ಮುರುಘರಾಜೇಂದ್ರ ಸ್ವಾಮೀಜಿ ಜನ್ಮದಿನದ ನಿಮಿತ್ತ ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ವಿತರಣೆ
ಮುರುಘರಾಜೇಂದ್ರ ಸ್ವಾಮೀಜಿ ಜನ್ಮದಿನದ ನಿಮಿತ್ತ ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 24 :
ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 49 ನೇ ಜನ್ಮದಿನದ ನಿಮಿತ್ತ ಭಕ್ತರಿಂದ ಕೋವಿಡ 2ನೇ ಅಲೆಯಿಲ್ಲ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಹಾಗೂ ಪತ್ರಿಕಾ ವಿತರಕರಿಗೆ ಆಹಾರ ಧಾನ್ಯ ಕಿಟ್ ಗಳನ್ನು ಗುರುವಾರದಂದು ಶ್ರೀ ಮಠದ ಆವರಣದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬಸನಗೌಡಾ ಪಾಟೀಲ, ಮಲ್ಲಿಕಾರ್ಜುನ ಈಟಿ, ವಿವೇಕ ಜತ್ತಿ, ಶಂಕರ ಗೋರೋಶಿ, ಎಸ್.ಎಸ್.ಅಂಗಡಿ, ಮಾಯಪ್ಪ ತಹಶೀಲ್ದಾರ, ಲೋಕಯ್ಯಾ ಹಿರೇಮಠ, ಎಂ.ಸಿ.ನೇಸರಗಿ, ಪ್ರಸನ್ನ ತಂಬಾಕಿ, ಬಸವರಾಜ ಹತ್ತರಕಿ, ಎಸ್.ಕೆ ಮಠದ, ಡಾ.ಸಿ.ಕೆ ನಾವಲಗಿ, ಬಸವರಾಜ ಖಾನಪ್ಪನವರ,ಮುರಗೇಶ ಹುಕ್ಕೇರಿ, ಮೈಲಾರಲಿಂಗ ಉಪ್ಪಿನ, ಸಂಜು ಗಾಣಿಗೇರ, ಶಕುಂತಲಾ ಕಟ್ಟಿ , ಸುಜಾತಾ ಮುಚಂಡ್ಡಿ ಹಿರೇಮಠ, ಸೇರಿದಂತೆ ಅನೇಕರು ಇದ್ದರು.