RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ

ಗೋಕಾಕ:ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ 

ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 16 :

ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳಿಂದ 2021-2 ನೇ ಸಾಲಿನ ಮುಂಗಾರು ಹಂಗಾಮಿನ ಸಮಗ್ರ ಕೃಷಿ ಅಭಿಯಾನ
ಮಾಹಿತಿ ರಥಕ್ಕೆ ಶುಕ್ರವಾರದಂದು ನಗರದ ಶಾಸಕರ ಕಛೇರಿಯಲ್ಲಿ ಕಾರ್ಮಿಕ ಮುಖಂಡರಾದ  ಅಂಬಿರಾವ ಪಾಟೀಲ  ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು  ಕೃಷಿ ಇಲಾಖೆಯಿಂದ ಹಮ್ಮಿಕೊಂಡ ಈ ಅಭಿಯಾನದಿಂದ ರೈತರಿಗೆ ಅನುಕೂಲವಾಗಿಲ್ಲಿದ್ದು, ಕೃಷಿ ಇಲಾಖೆಯ ನಡೆ ರೈತರ ಮನೆ ಬಾಗಿಲ ಕಡೆ  ಎಂಬ ವಿನೂತನ  ಕಾರ್ಯಕ್ರಮದಡಿ ತಾಲೂಕಿನಾದ್ಯಂತ ಈ ರಥ ಸಂಚರಿಸುವುದರಿಂದ  ಕೃಷಿ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ರೈತರಿಗೆ ಸಿಗುವ ಸಹಾಯ, ಸೌಲಭ್ಯಗಳು ಹಾಗೂ ತಾಂತ್ರಿಕ ಮಾಹಿತಿ ಒದಗಲಿದೆ. ರೈತರು ಈ ಕಾರ್ಯಕ್ರಮದ ಸದುಪಯೋಗವನ್ನು  ಪಡೆದುಕೊಳ್ಳಬೇಕೇಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ  ಎಮ್.ಎಮ್.ನದಾಫ್ ಮಾತನಾಡಿ  ಪ್ರತಿ ಹೋಬಳಿಯಲ್ಲಿ ಕೃಷಿ ಮಾಹಿತಿ ರಥವು 3 ದಿನಗಳ ಕಾಲ ಪ್ರತಿ ಗ್ರಾಮದಲ್ಲೂ ಸಂಚರಿಸಿ ರೈತರಿಗೆ ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಹಾಗೂ ಹೊಸ ತಾಂತ್ರಿಕ ಮಾಹಿತಿಯನ್ನು ರೈತರಿಗೆ  ಒದಗಿಸಿ ಕೊಡಲಾಗುವುದು ಜೊತೆಗೆ  ಮಾಹಿತಿ ರಥದೊಂದಿಗೆ ತೋಟಗಾರಿಕೆ, ರೇಷ್ಮೆ,ಅರಣ್ಯ ಹಾಗೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಆಯಾ ಇಲಾಖೆಗಳಲ್ಲಿ ಸಿಗುವ ಸಹಾಯ ಸವಲತ್ತುಗಳ ಬಗ್ಗೆ  ತಿಳಿಸಿಕೊಡುವರು.  ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕ್ಷೇತ್ರ ಭೇಟಿ ಮಾಡಿ ಸ್ಥಳದಲ್ಲಿಯೇ ರೈತರಿಗೆ ಕೀಟ ಹಾಗೂ ರೋಗ ನಿಯಂತ್ರಣ ಮತ್ತು ಹತೋಟಿ ಕ್ರಮಗಳ ಬಗ್ಗೆ ತಿಳಿಸಿಕೊಡಲಾಗುವುದು.
2021-22 ನೇ ಸಾಲಿನ ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆಯು ಪ್ರಾರಂಭವಾಗಿದ್ದು, ರೈತರು “ನನ್ನ ಬೆಳೆ, ನನ್ನ ಹಕ್ಕು” ಎಂಬ ಧ್ಯೇಯದೊಂದಿಗೆ ಪ್ಲೆಸ್ಟೋರ್‍ನಲ್ಲಿ ಲಭ್ಯವಿರುವ ಆ್ಯಪ್‍ನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಕ್ಷೇತ್ರಗಳಲ್ಲಿರುವ ಬೆಳೆಗಳನ್ನು ನಮೂದಿಸಿಕೊಳ್ಳಬೇಕೆಂದು  ನಧಾಫ್ ಹೇಳಿದರು .
ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ  ಸದಸ್ಯರಾದ ಟಿ.ಆರ್.ಕಾಗಲ್,  ಕೃಷಿ ಅಧಿಕಾರಿಗಳಾದ ಎಂ,ಎಲ್. ಜನ್ಮಟ್ಟಿ , ಶಂಕರ ಹಳ್ಳದಮನಿ, ಎಸ್.ಬಿ.ಕರಗಣ್ಣಿ, ಅಶೋಕ ಮೇಸ್ತ್ರಿ, ರೇಷ್ಮೇ ಇಲಾಖೆ & ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related posts: