RNI NO. KARKAN/2006/27779|Monday, September 16, 2024
You are here: Home » breaking news » ಘಟಪ್ರಭಾ :ಪ್ರಧಾನಿ ನರೇಂದ್ರ ಮೋದಿಯವರು ನವಭಾರತದ ನಿರ್ಮಾಪಕರು: ಮಾಜಿ ಸಚಿವ ಬಾಲಚಂದ್ರ

ಘಟಪ್ರಭಾ :ಪ್ರಧಾನಿ ನರೇಂದ್ರ ಮೋದಿಯವರು ನವಭಾರತದ ನಿರ್ಮಾಪಕರು: ಮಾಜಿ ಸಚಿವ ಬಾಲಚಂದ್ರ 

ಪ್ರಧಾನಿ ನರೇಂದ್ರ ಮೋದಿಯವರು ನವಭಾರತದ ನಿರ್ಮಾಪಕರು: ಮಾಜಿ ಸಚಿವ ಬಾಲಚಂದ್ರ

ಘಟಪ್ರಭಾ ಸೆ 17 : ಪ್ರಧಾನಿ ನರೇಂದ್ರ ಮೋದಿಯವರು ನವಭಾರತದ ನಿರ್ಮಾಪಕರು ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಪ್ರಶಂಸಿಸಿದರು.
ಇಲ್ಲಿಗೆ ಸಮೀಪದ ಬಳೋಬಾಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ನಡೆದ ಸೇವಾ ದಿವಸ ಕಾರ್ಯಕ್ರಮದಲ್ಲಿ ಅವರು ಬಡರೋಗಿಗಳಿಗೆ ಹಣ್ಣುಹಂಪಲ ವಿತರಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿಯವರು ನವಭಾರತದ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ತಮ್ಮ ಇಡೀ ಜೀವಮಾನವನ್ನು ದೇಶದ ಸಮಗ್ರ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಇಡೀ ಜಗತ್ತು ಭಾರತದತ್ತ ಸೆಳೆಯಲು ಮೋದಿಯವರ ನಾಯಕತ್ವವೇ ಕಾರಣವೆಂದು ಹೇಳಿದರು.
ಮೋದಿಜೀ ಭಾರತ ಕಂಡ ಅತ್ಯಂತ ಬಲಾಢ್ಯ ಪ್ರಧಾನಮಂತ್ರಿ ಎಂದು ಬಣ್ಣಿಸಿದ ಅವರು, ಭಾರತ ಜಗತ್ತಿನಲ್ಲಿ ಬಲಶಾಲಿ ರಾಷ್ಟ್ರವಾಗಲು ಮೋದಿಯವರ ಕೊಡುಗೆ ಅಪಾರವೆಂದು ಹೇಳಿದರು.ದೇಶದ ಎಲ್ಲ ವರ್ಗಗಳ ಜನರ ಪ್ರಗತಿಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಅಂತಹ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಕೆಲಸ ನಡೆಯಬೇಕಿದೆ ಎಂದು ಹೇಳಿದರು.

ಮೋದಿಜೀಯವರಿಗೆ ದೇವರು ಆಯುರಾರೋಗ್ಯ ಭಾಗ್ಯ ಕಲ್ಪಿಸಲೆಂದು ಶುಭ ಕೋರಿದರು.
ಬಳೋಬಾಳ ಸರ್ಕಾರಿ ಆಸ್ಪತ್ರೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುವುದಾಗಿ ಅವರು ಹೇಳಿದರು.

ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ಮುತ್ತೆಪ್ಪ ಕುಳ್ಳೂರ, ಪ್ರಧಾನಿ ಕಳಸನ್ನವರ, ಲಗಮನ್ನಾ ಕಳಸನ್ನವರ, ಭೀಮಶೆಪ್ಪ ಕಲ್ಲೋಳಿ, ವಿನೋದ ಪೂಜೇರಿ, ಬಸವರಾಜ ಕೋಟಗಿ, ಸಿದ್ದಯ್ಯಾ ಹೋಳಗಿ, ಶಿವಾನಂದ ದೊಡಕೆಂಚನವರ, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಎಸ್.ಬಿ. ಶಿಂಗ್ಯಾಗೋಳ, ಕಾಡಪ್ಪ ಮ್ಯಾಗಡಿ, ಮುಂತಾದವರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ನಂತರ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.

Related posts: