ಗೋಕಾಕ:ಶಾಸಕ ರಮೇಶ ಅವರು ನಗರವನ್ನು ಅಭಿವೃದ್ಧಿ ಪಡೆಸಲು ಶ್ರಮಿಸುತ್ತಿದ್ದಾರೆ : ಶಿವಾನಂದ ಹಿರೇಮಠ
ಶಾಸಕ ರಮೇಶ ಅವರು ನಗರವನ್ನು ಅಭಿವೃದ್ಧಿ ಪಡೆಸಲು ಶ್ರಮಿಸುತ್ತಿದ್ದಾರೆ : ಶಿವಾನಂದ ಹಿರೇಮಠ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 12 :
ಶಾಸಕ ರಮೇಶ ಜಾರಕಿಹೊಳಿ ಅವರು ಸರಕಾರದಿಂದ ಬರುವ ಅನುದಾನವನ್ನು ತ್ವರಿತವಾಗಿ ತಂದು ನಗರವನ್ನು ಅಭಿವೃದ್ಧಿ ಪಡೆಸಲು ಶ್ರಮಿಸುತ್ತಿದ್ದಾರೆ ಎಂದು ಪೌರಾಯುಕ್ತ ಶಿವಾನಂದ ಹಿರೇಮಠ ಹೇಳಿದರು.
ರವಿವಾರದಂದು ಇಲ್ಲಿನ ಅಂಬೇಡ್ಕರ್ ನಗರದ ವಾರ್ಡ್ 22 ರಲ್ಲಿ ನಗರಸಭೆ ವತಿಯಿಂದ ಸನ್ 2019-20 ಸಾಲಿನ ಎಸ್.ಎಫ್.ಸಿ ಯೋಜನೆಯಡಿಯಲ್ಲಿ ಮಂಜೂರಾದ ವಿವಿಧ ಕಾಮಗಾರಿಗಳ ಭೂಮಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುಮಾರು 1 ಕೋಟಿ ರೂ ವೆಚ್ಚದಲ್ಲಿ ಅಂಬೇಡ್ಕರ್ ನಗರದಲ್ಲಿ ಕಾಂಕ್ರೀಟ್ ರಸ್ತೆ, ಗಟಾರ ನಿರ್ಮಾಣ ಕಾಮಗಾರಿ ಕೈಗೋಳ್ಳುತ್ತಿದ್ದು, ಕಾಮಗಾರಿ ತ್ವರಿತವಾಗಿ ಮುಗಿಯಲು ಸಾರ್ವಜನಿಕರ ಸಹಕಾರ ಅತಿ ಅವಶ್ಯಕವಾಗಿದ್ದು, ನಗರಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 25 ಕೋಟಿ ಅನುದಾನದಲ್ಲಿ ಮಂಜೂರಾಗಿದ್ದು, ಬರುವ ದಿನಗಳಲ್ಲಿ ನಗರದಲ್ಲಿ ಗಾರ್ಡನ್ , ರಸ್ತೆ, ಗಟಾರು ಸೇರಿದಂತೆ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರು ಮಾರ್ಗದಲ್ಲಿ ಸಂರ್ಕೀಣಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಸ್ಥಾಯಿ ಸಮಿತಿ ಚೇರಮನ್ ಕೆ.ಎಂ.ಗೋಕಾಕ, ನಗರಸಭೆ ಸದಸ್ಯರುಗಳಾದ ಅಬ್ದುಲರೆಹಮಾನ್ ದೇಸಾಯಿ, ಯೂಸುಫ್ ಅಂಕಲಗಿ, ಸಂತೋಷ್ ಮಂತ್ರಣ್ಣವರ, ಹರೀಶ ಬೂದಿಹಾಳ, ಸಿದ್ದಪ್ಪ ಹುಚ್ಚರಾಮಗೋಳ, ಶ್ರೀಶೈಲ ಯಕ್ಕುಂಡಿ, ಹನುಮಂತ ಕಾಳಮನಗುಡಿ, ಮುಖಂಡರುಗಳಾದ ದುರ್ಗಪ್ಪ ಶಾಸ್ತ್ರಿಗೋಲ್ಲರ, ಕಾಶಿಮ ಖಲೀಫ್, ಜ್ಯೋತಿಭಾ ಸುಭಂಜಿ, ವಿಜಯ ಜತ್ತಿ, ಬಸವರಾಜ ದೇಶನೂರ, ಬಸವರಾಜ ಮಾಳಗಿ, ವಿಶ್ವನಾಥ್ ಬಿಳ್ಳೂರ, ಅಬ್ದುಲ್ ಸತ್ತಾರ ಶಾಬಾಶಖಾನ, ಶ್ರೀಶೈಲ ಪೂಜೇರಿ, ಗುತ್ತಿಗೆದಾರ ಮಂಜುನಾಥ್ ಗಂಗರಡ್ಡಿ ಸೇರಿದಂತೆ ಅನೇಕರು ಇದ್ದರು.